ಮಾ.4ರಂದು ಜಿಲ್ಲೆಯಾದ್ಯಂತ ಪಂಚಮಸಾಲಿಗಳಿಂದ ರಸ್ತೆ ಬಂದ್

Must Read

ಮೂಡಲಗಿ: ಕಳೆದ ಎರಡು ವರ್ಷಗಳ ಹೆಚ್ಚು ದಿನಗಳಿಂದ ರಾಜ್ಯದಲ್ಲಿ ಪಂಚಮಸಾಲಿಗಳಿಗೆ 2ಎ ಮೀಸಲಾಗಿ  ವಿವಿಧ ರೀತಿಯ ಹೋರಾಟ ಹಾಗೂ ಕಳೆದ 50 ದಿನಗಳಿಂದ ಪಂಚಮಸಾಲಿ ಶ್ರೀಗಳು ಬೆಂಗಳೂರದಲ್ಲಿ ಸತ್ಯಾಗ್ರಹ ನಡೆಸುತ್ತಿದ್ದರೂ ಸರಕಾರ ಸ್ಪಂದಿಸದ ಕಾರಣ ಶ್ರೀಗಳ ಆದೇಶದಂತೆ ಶನಿವಾರ ಮಾ.4 ರಂದು ಮುಂಜಾನೆ 11 ಗಂಟೆಯಿಂದ  ಬೆಳಗಾವಿ ಜಿಲ್ಲೆಯಾದ್ಯಂತ ತಾಲೂಕಾ ಹಾಗೂ ಗ್ರಾಮಮಟ್ಟದಲ್ಲಿ ಮುಖ್ಯ ರಸ್ತೆಗಳು ಬಂದ್ ಮಾಡಿ ಪ್ರತಿಭಟಿಸಲಾಗುವುದು ಎಂದು ಪಂಚಮಸಾಲಿ  ಸಮಾಜ ಸಂಘಟನೆಯ ಬೆಳಗಾವಿ ಜಿಲ್ಲಾ ಕಾರ್ಯಾಧ್ಯಕ್ಷ  ನಿಂಗಪ್ಪ ಪಿರೋಜಿ ಅವರು ತಿಳಿಸಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಗುರುವಾರದಂದು ಮಾತನಾಡಿ, ಬೆಳಗಾವಿ ಜಿಲ್ಲೆಯಲ್ಲಿನ ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ಪಂಚಮಸಾಲಿ ಸಮಾಜ ಭಾಂಧವರ ಹೆಚ್ಚಿನ ಸಂಖ್ಯೆಯಲ್ಲಿ ಕೂಡಿಕೊಂಡು ರಸ್ತೆಗಳನ್ನು ಬಂದ ಮಾಡಿ ಸರಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸವನ್ನು ಮಾಡಬೇಕೆಂದು ಪಿರೋಜಿ ಅವರು ತಿಳಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group