ಬೀದರ – ಮನೆ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ಕರೆತರುವಾಗ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ ಆರೋಪಿಯ ಕಾಲಿಗೆ ಗುಂಡೇಟು ಬಿದ್ದಿದೆ.
ಬೀದರ್ ತಾಲೂಕಿನ ಹೊನ್ನಿಕೇರಿ ಬಳಿ ಈ ಘಟನೆ ನಡೆದಿದ್ದು ಬೀದರ್ ಮೂಲದ ಜಗದೀತ್ ಸಿಂಗ್ ಹಾಗೂ ಮಹಾರಾಷ್ಟ್ರ ಮೂಲದ ಕರ್ತಾರ್ ಸಿಂಗ್ ನನ್ನು ಮಹಾರಾಷ್ಟ್ರದ ಬೀಡ್ ನಲ್ಲಿ ಬಂಧಿಸಿ ಬೀದರ್ ಗೆ ಕರೆತರುವಾಗ ಪೊಲೀಸ್ ಮೇಲೆ ಹಲ್ಲೆಗೆ ಯತ್ನಿಸಿದ ಹಿನ್ನೆಲೆಯಲ್ಲಿ ಕಾಲಿಗೆ ಗುಂಡು ಹಾಕಿದ್ದಾರೆ.

ಇಷ್ಟರಲ್ಲಿಯೇ ದರೋಡೆಕೋರರ ಹಲ್ಲೆಯಿಂದ ಕಾನ್ಸ್ ಟೇಬಲ್ ಮಕ್ಸೂದ್ ಗೆ ಭುಜಕ್ಕೆ ಗಾಯವಾಗಿದೆ. ಆತ್ಮ ರಕ್ಷಣೆಗಾಗಿ ಬೀದರ್ ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ GS ಬಿರಾದಾರ ಆರೋಪಿಯ ಕಾಲಿಗೆ ಗುಂಡು ಹೊಡೆದರು.
ಎಪ್ರಿಲ್ 26 ರಂದು ಬೀದರ್ ನ ಓಲ್ಡ್ ಆದರ್ಶ ಕಾಲೋನಿಯ ಮನೆಯಲ್ಲಿ ದರೋಡೆಯಾಗಿತ್ತು. ಆರು ಜನ ದರೋಡೆಕೋರರು ಮಾರಕಾಸ್ತ್ರ ತೋರಿಸಿ ಸುಮಾರು 280 ಗ್ರಾಂ. ಬಂಗಾರ ದರೊಡೆ ಮಾಡಿದ್ದರು. ಇವರಲ್ಲಿ ಇಬ್ಬರನ್ನು ಬಂಧಿಸಿ ಕರೆತರುವಾಗ ಈ ಘಟನೆ ನಡೆದಿದೆ.
ಜಿಲ್ಲಾ ಎಸ್ಪಿ ಪ್ರದೀಪ್ ಗುಂಟೆ ನೇತೃತ್ವದಲ್ಲಿ ಗ್ರಾಮೀಣ ಸಿಪಿಐ ಜಿ ಎಸ್ ಬಿರಾದರ ಗುಂಡು ಹಾರಿಸಿದ್ದಾರೆ. ಗುಂಡೇಟು ತಿಂದ ಆರೋಪಿಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ವಿಚಾರಣೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವರದಿ : ನಂದಕುಮಾರ ಕರಂಜೆ, ಬೀದರ