ಸಿಂದಗಿ: ಕನ್ನಡ ರಾಜ್ಯೋತ್ಸವ ಹಾಗೂ ಪ್ರಜಾವಾಣಿ ಅಮೃತ ಮಹೋತ್ಸವ ಪ್ರಯುಕ್ತ ಮಂದಾರ ಪ್ರತಿಷ್ಠಾನ ಸಿಂದಗಿ, ನಬಿರೋಷನ್ ಪ್ರಕಾಶನ ಬೋರಗಿ, ಕರ್ನಾಟಕ ರಕ್ಷಣಾ ವೇದಿಕೆ, (ಪ್ರವೀಣ್ ಶೆಟ್ಟಿ ಬಣ) ಸಿಂದಗಿ ಇವರ ಸಹಯೋಗದಲ್ಲಿ ಪಟ್ಟಣದ ಎಲೈಟ್ ಪದವಿ ಪೂರ್ವ ಕಾಲೇಜಿನಲ್ಲಿ ಇದೆ ನ.26 ರಂದು ನಡೆಯಲಿರುವ ಕನ್ನಡ ಹಬ್ಬ ಕಾರ್ಯಕ್ರಮದಲ್ಲಿ ತಾಲೂಕಿನ ಚಿಕ್ಕ ಸಿಂದಗಿ ಗ್ರಾಮದ ಶಿಕ್ಷಕ ಸಾಹಿತಿ ಬಸವರಾಜ ರಾ. ಅಗಸರ ಇವರನ್ನು ಸಂಕೀರ್ಣ ಕ್ಷೇತ್ರದಲ್ಲಿ ಜಿಲ್ಲಾ ಸಿರಿಗನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಮಂದಾರ ಪ್ರತಿಷ್ಠಾನದ ಸಂಚಾಲಕ ಸಿದ್ದಲಿಂಗ ಚೌಧರಿ ನಬಿರೋಷನ್ ಪ್ರಕಾಶನದ ಮೌಲಾಲಿ ಕೆ. ಆಲಗೂರ ಕರವೇ (ಪ್ರವೀಣ್ ಶೆಟ್ಟಿ ಬಣದ) ತಾಲೂಕು ಅಧ್ಯಕ್ಷ ಸದ್ದಾಂ ಆಲಗೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿರಿಗನ್ನಡ ಜಿಲ್ಲಾ ಪ್ರಶಸ್ತಿಗೆ ಸಾಹಿತಿ ಬಸವರಾಜ ಆಯ್ಕೆ
0
269
RELATED ARTICLES