Homeಸುದ್ದಿಗಳುಮಹಾರತ್ನ ಟ್ರಸ್ಟ್ ನಿಂದ ಸಂಗೀತ ರತ್ನ ಹಾಗೂ ಸಾಹಿತ್ಯ ರತ್ನ ಪ್ರಶಸ್ತಿ ಪುರಸ್ಕಾರ

ಮಹಾರತ್ನ ಟ್ರಸ್ಟ್ ನಿಂದ ಸಂಗೀತ ರತ್ನ ಹಾಗೂ ಸಾಹಿತ್ಯ ರತ್ನ ಪ್ರಶಸ್ತಿ ಪುರಸ್ಕಾರ

ಮೈಸೂರಿನ ಮಹಾರತ್ನ ಟ್ರಸ್ಟ್ ವತಿಯಿಂದ ಇತ್ತೀಚೆಗೆ ಜಗನ್ಮೋಹನ ಅರಮನೆಯಲ್ಲಿ  2ನೇ ವಾರ್ಷಿಕೋತ್ಸವದ ಪ್ರಯುಕ್ತ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಖ್ಯಾತ ಹಿಂದೂಸ್ತಾನಿ ಗಾಯಕ ಹಾಗೂ ಶಿಕ್ಷಕ ವೀರಭದ್ರಯ್ಯ ಹಿರೇಮಠ ಅವರಿಗೆ ಸಂಗೀತ ರತ್ನ ಹಾಗೂ ಪ್ರಸಿದ್ಧ ಕವಿ ಡಾ.ಜಯಪ್ಪ ಹೊನ್ನಾಳಿ ಅವರಿಗೆ ಸಾಹಿತ್ಯ ರತ್ನ ಪ್ರಶಸ್ತಿಯನ್ನು ಖ್ಯಾತ ಚಲನಚಿತ್ರ ನಟ ಶಂಕರ ಅಶ್ವತ್ಥ ಅವರು ನೀಡಿ ಸನ್ಮಾನಿಸಿ, ಗೌರವಿಸಿದರು.

ಖಜಾಂಜಿ ನಾಗರತ್ನ, ಅಧ್ಯಕ್ಷ ಎಂ.ಮಹಾಲಿಂಗ, ಪ್ರೊ.ಮೈಸೂರು ಕೃಷ್ಣಮೂರ್ತಿ, ಕವಿಯತ್ರಿ ಶ್ರೀಮತಿ ಮ.ನ.ಲತಾ ಮೋಹನ್, ಕಾರ್ಯದರ್ಶಿ ಶ್ರೀಮತಿ ರೂಪ, ಸಹ ಕಾರ್ಯದರ್ಶಿ ಶ್ರೀಮತಿ ನಾಗಶ್ರೀ ಎನ್. ಹಾಗೂ ಮುಂತಾದವರನ್ನು ಉಪಸ್ತಿತರಿದ್ದರು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಪ್ರಶಸ್ತಿಗಳನ್ನು ನೀಡಿ ಪುರಸ್ಕರಿಸಲಾಯಿತು.

RELATED ARTICLES

Most Popular

error: Content is protected !!
Join WhatsApp Group