ಹಳ್ಳೂರ – ಗ್ರಾಮದ ಅಭಿವೃದ್ಧಿಗೆ ಆದ್ಯತೆ ನೀಡಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಕಾರ್ಯ ಮಾಡಿ ಗ್ರಾಮದ ಶ್ರೇಯೋಭಿವೃದ್ಧಿಗೆ ಶ್ರಮಿಸೋಣ ಎಂದು ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ ಯುವ ನಾಯಕ ಸರ್ವೋತ್ತಮ ಜಾರಕಿಹೋಳಿ ಹೇಳಿದರು.
ಅವರು ಗ್ರಾಮದಲ್ಲಿ ನರೇಗಾ ಯೋಜನೆಯಲ್ಲಿ (ಜಿ ಡಬ್ಲ್ಯೂ ಎಂ) ರೂ 2.24 ಕೋಟಿ ಚರಂಡಿ ಕಾಮಗಾರಿಗಳಿಗೆ ಹಾಗೂ ಅರಬಾಂವಿ ಶಾಸಕರಾದ ಭಾಲಚಂದ್ರ ಜಾರಕಿಹೋಳಿ ಅವರ ಅನುದಾನದ ಯೋಜನೆಯಲ್ಲಿ ಬಸ್ ತಂಗುದಾಣ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಈ ಸಮಯದಲ್ಲಿ ಗ್ರಾಂ ಪಂಚಾಯತ್ ಅಧ್ಯಕ್ಷೆ ನೀಲವ್ವ ಹೊಸಟ್ಟಿ, ಉಪಾದ್ಯಕ್ಷ ಜಯಶ್ರೀ ಮಿರ್ಜಿ, ಮಾಜಿ ಜಿ ಪಂ ಸದಸ್ಯ ಭೀಮಶಿ ಮಗದುಮ, ಮಾಜಿ ಗ್ರಾಂ ಪ ಅಧ್ಯಕ್ಷ ಲಕ್ಷ್ಮಣ ಕತ್ತಿ, ಶಾಸಕರ ಆಪ್ತ ಸಹಾಯಕ ಅಬ್ದುಲ ಮಿರ್ಜಾ ನಾಯ್ಕ, ಮುಪ್ಪಯ್ಯ ಹಿಪ್ಪರಗಿ, ಹನಮಂತ ತೇರದಾಳ, ಅಡಿವೆಪ್ಪ ಪಾಲಬಾಂವಿ, ಯಮನಪ್ಪ ನಿಡೋನಿ, .ಮಹಾವೀರ ಛಬ್ಬಿ, ಮಾದೇವ ಹೊಸಟ್ಟಿ, ಕುಮಾರ ಲೋಕನ್ನವರ, ಅಯ್ಯಪ್ಪ ಹಿರೇಮಠ, ಶ್ರೀಶೈಲ ಬಾಗೋಡಿ, ಮುರಿಗೆಪ್ಪ ಮಾಲಗಾರ, ಬಸವರಾಜ್ ಲೋಕನ್ನವರ, ಪ್ರದೀಪ್ ಪಾಲಬಾಂವಿ, ಲಕ್ಷ್ಮಣ ಛಬ್ಬಿ, ಭೀಮಶಿ ಡಬ್ಬನ್ನವರ, ಶ್ರೀಶೈಲ ಲೋಕನ್ನವರ, ಪ್ರಕಾಶ ಕಾಂಬಳೆ, ಶಿವಪ್ಪ ಅಟ್ಟಮಟ್ಟಿ, ಸಿದ್ದಣ್ಣ ದುರದುಂಡಿ, ಇಂಜಿನಿಯರ ವಿಠ್ಠಲ ಬೋರನ್ನವರ, ಕಾರ್ಯದರ್ಶಿ ಶಿವಾನಂದ ಸಂಪಗಾರ, ಮಹಾಂತೇಶ ಸಂತಿ, ಮಹಾಂತೇಶ ಕುಂದರಗಿ ಸೇರಿದಂತೆ ಗ್ರಾಂ ಪ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.