ದೇಶಾದ್ಯಂತ SBI ಬ್ಯಾಂಕ್ ನಡೆ ಗ್ರಾಮದ ಕಡೆ ಕಾರ್ಯಕ್ರಮ

Must Read

ಬೀದರ – ಎಸ್.ಬಿ.ಐ ಬ್ಯಾಂಕ್ ನಡೆ ಹಳ್ಳಿ ಕಡೆ ಈ ಕಾರ್ಯಕ್ರಮ ದೇಶಾದ್ಯಂತ ಪ್ರತಿಯೊಂದು ಜಿಲ್ಲೆಯಲ್ಲಿ ನಡೆಯುತ್ತದೆ ಎಂದು ಎಸ್ ಬಿ ಐ ಬ್ಯಾಂಕ್ ರೀಜನಲ್ ಜನರಲ್ ಮ್ಯಾನೇಜರ್ ಹರೀಶ ಹೇಳಿದರು.

ಗಡಿ ಜಿಲ್ಲೆ ಬೀದರ್ ತಾಲ್ಲೂಕಿನ ಮನ್ನಹಳಿ ಗ್ರಾಮದಲ್ಲಿ ಶುಕ್ರವಾರ ನಡೆದ ಎಸ್ ಬಿ ಬ್ಯಾಂಕ್ ನಡೆ ಗ್ರಾಮದ ಕಡೆ ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮ ಎಸ್ ಬಿ ಐ ಬ್ಯಾಂಕ್ ವತಿಯಿಂದ ನಾವು ಆಯ್ದುಕೊಂಡ ಗ್ರಾಮ ಬೀದರ್ ತಾಲ್ಲೂಕಿನ ಮನ್ನಹಳಿ ಗ್ರಾಮ ಆಯ್ದುಕೊಂಡಿದ್ದಾಗಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ಬೀದರ್ ಜಿಲ್ಲೆಯ ಹಲವು ಅಧಿಕಾರಿಗಳು, ಮನ್ನಹಳಿ ಗ್ರಾಮದ ಸುತ್ತ ಮುತ್ತ ಇರುವ ಹಳ್ಳಿಯ ಜನರು ಮತ್ತು ಶಾಲೆ ಮಕ್ಕಳು ಭಾಗವಹಿಸಿದ್ದರು.

ಎಸ್ ಬಿ ಐ ಬ್ಯಾಂಕ್ ಪ್ರತಿಯೊಂದು ಯೋಜನೆ ಮೇಲೆ ಹಾಗು ಕೇಂದ್ರ ಸರಕಾರದ ಮತ್ತು ರಾಜ್ಯ ಸರ್ಕಾರದ ಯೋಜನೆ ಮೇಲೆ ಬ್ಯಾಂಕ್ ಸಾಲ ಕೊಡಲು ಮುಂದೆ ಬಂದಿದೆ.

ಬಡವರು ಮತ್ತು ಒಂದೇ ಎಕರೆ ಜಮೀನಿನಲ್ಲಿ ಸೋಲಾರ್ ಪ್ಯಾನೆಲ್ ಹಾಕಿಕೊಂಡು ಸ್ವತಃ ಉದ್ಯೋಗ ಮಾಡಬಹುದು ಎಂದು ಹೇಳಿದರು.ಹೈನುಗಾರಿಕೆ ಕೋಳಿ ಸಾಕಾಣಿಕೆ ಮಾಡುವವರಿಗೆ ನಮ್ಮ ಬ್ಯಾಂಕ್ ಸಾಲ ನೀಡಲು ಆರಂಭಿಸಿದ್ದೇವೆ. ಎಲ್ಲರೂ ಈ ಯೋಜನೆಯ ಲಾಭವನ್ನು ಪಡೆಯಬಹುದು ಎಂದು ಹೇಳಿದರು.


ವರದಿ: ನಂದಕುಮಾರ ಕರಂಜೆ, ಬೀದರ್

Latest News

ಸಿಂದಗಿ : ಆರೆಸ್ಸೆಸ್ ಗಣ ವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ

ಸಿಂದಗಿ; ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದ ಹಾಗೂ ದೀಪಾವಳಿ ಉತ್ಸವದ ಅಂಗವಾಗಿ ಸಾವಿರಕ್ಕೂ ಹೆಚ್ಚು ಗಣ ವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.ಶನಿವಾರ...

More Articles Like This

error: Content is protected !!
Join WhatsApp Group