ಸಿಂದಗಿ; ಗಡಿನಾಡು ಬೆಳಗಾವಿಯಲ್ಲಿ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಧ್ವಂಸ ಮಾಡಿದ ಶಿವಸೇನೆ ಹಾಗೂ ಎಂಇಎಸ್ ಸಂಘಟನೆಯನ್ನು ನಿಷೇಧಿಸಿ ಆ ಸಂಘಟನೆಯ ಕಾರ್ಯಕರ್ತರನ್ನು ಗಡಿಪಾರು ಮಾಡುವಂತೆ ಆಗ್ರಹಿಸಿ ತಾಲ್ಲೂಕು ಕುರುಬರ ಸಂಘ ಮತ್ತು ಎಲ್ಲಾ ಸಂಘಟನೆಗಳ ಪದಾಧಿಕಾರಿಗಳು ದಂಡಾಧಿಕಾರಿ ಸಂಜೀವಕುಮಾರ ದಾಸರ ಅವರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕುರುಬ ಸಮಾಜದ ಗೌರವಾಧ್ಯಕ್ಷ ಸುದರ್ಶನ ಜಂಗಣ್ಣಿ ಮಾತನಾಡಿ, ಸಂಘಟನೆಗಳು ಸಾರ್ವಜನಿಕರಿಗೆ ಹಾಗೂ ದೇಶಕ್ಕೆ ಒಳಿತನ್ನು ಬಯಸಿ ಕ್ರಿಯಾತ್ಮಕ ಚಟುವಟಿಕೆವುಳ್ಳ ಸಂಘಟನೆಗಳಾಗಬೇಕು ಹೊರತು ಕನ್ನಡಿಗರ ಸ್ವಾಭಿಮಾನಕ್ಕೆ ದಕ್ಕೆ ತರುವಂಥ ಸಂಘಟನೆಗಳು ಇದ್ದರೆ ಸಮಾಜಘಾತುಕ ಶಕ್ತಿಗಳೆಂದು ಪರಿಗಣಿಸಿ ಅವುಗಳನ್ನು ರದ್ದುಪಡಿಸುವುದು ಆಡಳಿತಾರೂಡ ಸರಕಾರದ ಜವಾಬ್ದಾರಿ ಅದನ್ನು ಬಿಟ್ಟು ಅಧಿವೇಶನ ನಡೆಯುವ ಸಂದರ್ಭದಲ್ಲಿ ಕನ್ನಡಾಂಬೆ ಧ್ವಜವನ್ನು ಸುಟ್ಟು ಕಾಂತ್ರಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ದ್ವಂಸ ಮಾಡಿದ್ದು ಕನ್ನಡಿಗರ ಸ್ವಾಭಿಮಾನವನ್ನು ಕೆರಳಿಸಿದಂತಾಗಿದೆ ಇಂತಹ ಸಂಘಟನೆಗಳನ್ನು ಮಹಾರಾಷ್ಟ್ರ ಸರಕಾರ ಪ್ರೋತ್ಸಾಹಿಸುತ್ತಿದೆ. ಎಂಇಎಸ್ ಮತ್ತು ಶಿವಸೇನೆ ಪದೇ ಪದೇ ಇಂತಹ ಘಟನೆಗಳಿಗೆ ಕೈಹಾಕಿದೆ ಕಾರಣ ಸರಕಾರ ಕೂಡಲೇ ಈ ಸಂಘಟನೆಗಳನ್ನು ಕರ್ನಾಟಕ ರಾಜ್ಯದಲ್ಲಿ ಬ್ಯಾನ್ ಮಾಡಬೇಕು ಮತ್ತು ಕನ್ನಡದ ಧ್ವಜವನ್ನು ಸುಟ್ಟಿರುವ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು ಈ ಸಂಘಟನೆಗಳ ಪುಂಡಾಟಕ್ಕೆ ಮಹಾರಾಷ್ಟ್ರ ಸರಕಾದ ಇರುವುದರಿಂದ ಕಿಡಗೇಡಿಗಳು ತನ್ನತನವನ್ನು ಮರೆಯುತ್ತಿದೆ ಸರಕಾರ ಕೂಡಲೇ ಎಚ್ಚೆತ್ತುಕೊಂಡು ಈ ಸಂಘಟನೆಗಳನ್ನು ರಾಜ್ಯದಲ್ಲಿ ರದ್ದುಗೊಳಿಸಬೇಕು ಕನ್ನಡ ಧ್ವಜ ಸುಟ್ಟರೆ ನಮ್ಮ ತಾಯಿಯನ್ನು ಸುಟ್ಟಂತೆ ಈ ತರವಾದ ಕೃತ್ಯ ಎಸಗಿದವರು ಯಾರೇ ಆದರು ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಮುಂದಿನ ದಿನಮಾನಗಳಲ್ಲಿ ದೊಡ್ಡ ಮಟ್ಟದ ಹೋರಾಟ ಕೈಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಬದಲ್ಲಿ ಅಧ್ಯಕ್ಷ ನಿಂಗಣ್ಣ ಬಿರಾದಾರ, ನಿಂಗಪ್ಪ ಬಿಸನಾಳ, ಸಿದ್ದಣ್ಣ ಪೂಜಾರಿ, ದತ್ತು ಯಡಗಿ, ಭೀರು ಚೌಧರಿ, ಕುಮಾರ ಹರವಾಳ, ಲಕ್ಷ್ಮಣ ಹೂಗಾರ, ಪಿಂಟು ಪೂಜಾರಿ, ಮಾಳು ವಾಲಿಕಾರ, ಯಲ್ಲು ಬಮ್ಮನಹಳ್ಳಿ, ಸಿದ್ದು ಗೊರವಗುಂಡಗಿ ಜಗದೀಶ ಹೆಗ್ಗಣದೊಡ್ಡಿ, ಭಿಮಾಶಂಕರ ಹಿರೇಕುರಬರ, ವಿಠ್ಠಲ ನಾಯ್ಕೋಡಿ, ಸಿದ್ರಾಮ ಹಳ್ಳಿ, ಪರಶು ಮೊಕಾಶಿ, ಸುರೇಶ ಭೈರವಾಡಗಿ ಸೇರಿದಂತೆ ಅನೇಕರಿದ್ದರು.