ಪಿಯುಸಿ ; ಶ್ರೀ ಶಿವಬೋಧರಂಗ ಪದವಿ ಪೂರ್ವ ಕಾಲೇಜಿಗೆ ಉತ್ತಮ ಫಲಿತಾಂಶ

Must Read

ಮೂಡಲಗಿ: ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಶ್ರೀ ಶಿವಬೋಧರಂಗ ಪದವಿ ಪೂರ್ವ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ವಾರ್ಷಿಕ ಫಲಿತಾಂಶವು ಶೇಕಡಾ ಶೇ.೭೫ ರಷ್ಟಾಗಿದೆ ಎಂದು ಕಾಲೇಜಿನ ಪ್ರಾಚಾರ್ಯ ಪ್ರೊ.ಎಮ್.ಎಸ್.ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಲೇಜಿಗೆ ರಾಜಶ್ರೀ ಜಟ್ಟೆನ್ನವರ ಶೇ.೯೨.೬೬% ಮತ್ತು ಜೀಯಾ ನಾಯಕವಾಡಿ ಶೇ.೯೨.೬೬% ಪ್ರಥಮ, ಅಂಜಲಿ ನಿಂಗನೂರೆ ಶೇ.೯೨.೧೬% ಮತ್ತು ಯಲ್ಲವ್ವಾ ಕಪರಟ್ಟಿ ಶೇ.೯೨.೧೬% ದ್ವಿತೀಯ, ಪದ್ಮಶ್ರೀ ಬಡಿಗೇರ ಶೇ.೯೧.೧೬%, ರಾಧಿಕಾ ಮುರಗಜ್ಜಗೋಳ ಶೇ.೯೧.೧೬% ಮತ್ತು ಶ್ರೇಯಾ ದೇವರ ಶೇ.೯೧.೧೬% ತೃತೀಯ ಸ್ಥಾನವನ್ನು
ಪಡೆದುಕೊಂಡಿದ್ದಾರೆ.

ಕಲಾ ವಿಭಾಗದಲ್ಲಿ ರಾಜಶ್ರೀ ಜಟ್ಟೇನ್ನವರ ಶೇ.೯೨.೬೬% ಪ್ರಥಮ, ಪದ್ಮಶ್ರೀ ಬಡಿಗೇರ ಶೇ.೯೧.೧೬% ಮತ್ತು ರಾಧಿಕಾ
ಮುರಗಜ್ಜಗೋಳ ಶೇ.೯೧.೧೬% ದ್ವಿತೀಯ, ಐಶ್ವರ್ಯ ಪಾಟೀಲ ಶೇ.೯೦.೮% ತೃತೀಯ ಸ್ಥಾನ, ಒಟ್ಟು ಕಲಾ ವಿಭಾಗದಲ್ಲಿ ೧೩ ಜನ ಉನ್ನತ ಶ್ರೇಣಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಜೀಯಾ ನಾಯಕವಾಡಿ ಶೇ.೯೨.೬೬% ಪ್ರಥಮ, ಅಂಜಲಿ ನಿಂಗನೂರೆ ಶೇ.೯೨.೧೬% ಮತ್ತು ಯಲ್ಲವ್ವಾ ಕಪರಟ್ಟಿ ಶೇ.೯೨.೧೬% ದ್ವಿತೀಯ, ಶ್ರೇಯಾ ದೇವರ ಶೇ.೯೧.೧೬% ತೃತೀಯ ಸ್ಥಾನ ಒಟ್ಟು ವಿಜ್ಞಾನ ವಿಭಾಗದಲ್ಲಿ ೧೩ ಜನ ಉನ್ನತ ಶ್ರೇಣಿಯಲ್ಲಿ
ಸ್ಥಾನ ಪಡೆದುಕೊಂಡಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಲಕ್ಷ್ಮಿ ಹಳಬರ ಶೇ.೮೭% ಪ್ರಥಮ, ಕೀರ್ತನಾ ಪತ್ತಾರ ಶೇ.೮೬.೩೩% ದ್ವಿತೀಯ, ವಿನಾಯಕ ಕೊಡಗನೂರ ಶೇ.೮೩.೩೩% ತೃತೀಯ ಸ್ಥಾನ, ಒಟ್ಟಾರೆಯಾಗಿ ೨೮ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, ೧೪೩ ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಮತ್ತು ೫೪ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ,

ಸಾಧನೆಗೈದ ಈ ಎಲ್ಲ ವಿದ್ಯಾರ್ಥಿಗಳಿಗೆ ಸಂಸ್ಥೆಯ ಚೇರಮನ್ನರಾದ ವೆಂಕಟೇಶ ಆರ್.ಸೋನವಾಲ್ಕರ, ವ್ಹಾ.ಚೇರಮನ್ನರಾದ ರವೀಂದ್ರ ಪಿ.ಸೋನವಾಲ್ಕರ ಹಾಗೂ ಸಂಸ್ಥೆಯ ನಿರ್ದೇಶಕರು, ಪ್ರಾಚಾರ್ಯರಾದ ಎಮ್.ಎಸ್.ಪಾಟೀಲ, ಉಪನ್ಯಾಸಕರು ಮತ್ತು
ಕಾಲೇಜಿನ ಸಿಬ್ಬಂದಿ ವರ್ಗದವರು ಹರ್ಷವನ್ನು ವ್ಯಕ್ತಪಡಿಸಿ
ಅಭಿನಂದಿಸಿದ್ದಾರೆ.

Latest News

ಬೇವೂರ ಪದವಿ ಮಹಾವಿದ್ಯಾಲಯದಲ್ಲಿ ಸಂಭ್ರಮದ ಕರ್ನಾಟಕ ರಾಜ್ಯೋತ್ಸವ ಆಚರಣೆ.

ಬಾಗಲಕೋಟೆ : ಕನ್ನಡ ಭಾಷೆಗೆ ಸುದೀರ್ಘ ಇತಿಹಾಸ ಪರಂಪರೆ ಇದೆ. ಕದಂಬ ಚಾಲುಕ್ಯರಾದಿಯಾಗಿ ಅನೇಕ ಅರಸು ಮನೆತನಗಳ ಕಾಲಘಟ್ಟದಲ್ಲಿ ಶ್ರೀಮಂತಿಕೆಯ ಸಾಹಿತ್ಯ ರಚನೆಗೊಂಡು ನಾಡಿನ ಗತವೈಭವಕ್ಕೆ...

More Articles Like This

error: Content is protected !!
Join WhatsApp Group