ಹಿರಿಯ ಸಾಹಿತಿ ಡಾ. ಭೇರ್ಯ ರಾಮ ಕುಮಾರ್ ಅವರಿಗೆ ಕಾಯಕಯೋಗಿ ಬಸವೇಶ್ವರ ಪ್ರಶಸ್ತಿ

Must Read

ದಾವಣಗೆರೆಯ ವಿಶ್ವವೀರಶೈವ ಲಿಂಗಾಯಿತ ಏಕೀಕರಣ ಪರಿಷತ್ ಬಸವ ಜಯಂತಿಯ ಅಂಗವಾಗಿ ನೀಡುತ್ತಿರುವ ಪ್ರತಿಷ್ಠಿತ ಕಾಯಕಯೋಗಿ ಬಸವೇಶ್ವರ ಪ್ರಶಸ್ತಿಗೆ ಮೈಸೂರಿನ ಹಿರಿಯ ಸಾಹಿತಿ ,ಪರಿಸರ ಚಿಂತಕ ಹಾಗೂ ಸಾಹಿತ್ಯ ಸಂಘಟಕ ಡಾ. ಭೇರ್ಯ ರಾಮ ಕುಮಾರ್ ಆಯ್ಕೆಯಾಗಿದ್ದಾರೆ.

343 ರಾಜ್ಯ ಮಟ್ಟದ ಸಾಹಿತ್ಯೋತ್ಸವ ಸಂಘಟನೆ, 9000 ಜನರಿಂದ ಸಾಮೂಹಿಕ ನೇತ್ರದಾನಕ್ಕೆ ಮನವೊಲಿಸುವಿಕೆ, ಪರಿಸರ ಸಂರಕ್ಷಣೆ ಕುರಿತಂತೆ 1000 ಕ್ಕೂ ಹೆಚ್ಚು ಶಾಲಾ ಕಾಲೇಜುಗಳಲ್ಲಿ ಉಪನ್ಯಾಸ, 11000 ಕೂ ಹೆಚ್ಚು ಸಸಿಗಳ ವಿತರಣೆ,ಉದಯೋನ್ಮುಖ ಕವಿಗಳ 348 ಪುಸ್ತಕಗಳ ಪ್ರಕಾಶನ ಹೀಗೆ ಕಳೆದ 35 ಕೂ ಹೆಚ್ಚು ವರ್ಷಗಳಿಂದ ಡಾ. ಭೇರ್ಯ ರಾಮ ಕುಮಾರ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಮುಂದಿನ ಶನಿವಾರದಂದು ದಾವಣಗೆರೆಯ ಗುರುಭವನದಲ್ಲಿ ನಡೆಯುವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಹಿರಿಯ ಗಣ್ಯರು,ಸಾಧಕರು ಕಾಯಕ ಯೋಗಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

Latest News

ಮಾಚಿದೇವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು

ಮಡಿವಾಳ ಮಾಚಿದೇವರ ಜಯಂತಿ ಸಿಂದಗಿ; ಹನ್ನೆರಡನೆಯ ಶತಮಾನದಲ್ಲಿಯೇ ಸಮಾಜದ ಏಳ್ಗೆಗಾಗಿ ಸಮಾನತೆಯನ್ನು ಬಯಸಿದ ಶರಣ ಮಡಿವಾಳ ಮಾಚಿದೇವರ ಜೀವನ ಚರಿತ್ರೆ ಬಹಳ ಅರ್ಥ ಪೂರ್ಣವಾಗಿದೆ ಅವರ ವಚನಗಳನ್ನು...

More Articles Like This

error: Content is protected !!
Join WhatsApp Group