ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಸರಕಾರಿ ಶಾಲೆಗಳು ಮುಂಚೂಣಿಯಲ್ಲಿರಬೇಕು ಎಂದು ಶಿಕ್ಷಣ ಕ್ಷೇತ್ರಕ್ಕೆ ಹಲವಾರು ಯೋಜನೆಗಳ ಮೂಲಕ ಹಣ ಬಿಡುಗಡೆ ಮಾಡುತ್ತಿದ್ದರೂ ಕೂಡಾ ಬಡ ಮತ್ತು ಮಧ್ಯಮ ವರ್ಗದ ಜನರ ಮಕ್ಕಳಿಗೆ ಶಿಕ್ಷಣ ಕ್ಷೇತ್ರಕ್ಕೆ ಮರೀಚಿಕೆ ಎಂಬಂತೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಕೆಜಿ ಮತ್ತು ಯುಕೆಜಿಗೆ ಸಿಗುವ ಶಿಕ್ಷಣ ಸರಕಾರಿ ಅಂಗನವಾಡಿ ಕೇಂದ್ರಗಳಲ್ಲಿ ಸಿಗದಿರುವುದು ಖೇದಕರ.
ಹೌದು. ಮನೆಯೇ ಮೊದಲು ಪಾಠ ಶಾಲೆ ಜನನಿ ತಾನೇ ಮೊದಲ ಗುರು ಎಂಬಂತೆ ಸರಕಾರ ಎಲ್ಕೆಜಿ ಮತ್ತು ಯುಕೆಜಿ ಹಂತದ ಶಿಕ್ಷಣ ನೀಡಲು ತಾಲೂಕಿನಲ್ಲಿ 421 ಅಂಗನವಾಡಿಗಳನ್ನು ತೆರೆದಿದೆ ಅದಕ್ಕೆ 842 ಸಿಬ್ಬಂದಿ ಮತ್ತು ತಾಲೂಕಾ ಕಚೇರಿ ಅಲ್ಲಿ ಒಬ್ಬ ಅಧಿಕಾರಿ ನಾಲ್ಕೈದು ಜನ ಸಿಬ್ಬಂದಿ ನೇಮಕ ಮಾಡಿದೆ ಆದರೆ ಇಲ್ಲಿ ಗರ್ಭಿಣಿಯರ ದಾಖಲಾತಿ, ಭಾಗ್ಯಲಕ್ಷ್ಮೀ ಯೋಜನೆಯ ಉಸ್ತುವಾರಿ, ಮತ್ತು ಕೊವಿಡ್ ವಾರಿಯರ್ಸ್ ಹೀಗೆ ಹಲವಾರು ಕಾರ್ಯದಲ್ಲಿ ತೊಡಗಿ ಅಲ್ಲಿ ಸಿಗುವ ಬಿಡಿಗಾಸಿಗೆ ಸಿಬ್ಬಂದಿ ಮಾರುಹೋಗಿ ಪ್ರಾಥಮಿಕ ಹಂತದಲ್ಲಿ ಸಿಗುವ ಶಿಕ್ಷಣಕ್ಕೆ ದೊಡ್ಡ ಹೊಡೆತ ಬಿದ್ದು ಪಾಲಕರು ನಮಗೇಕೆ ಬೇಕು ಸರಕಾರಿ ಶಾಲೆಗಳು ಎನ್ನುವ ಮಟ್ಟಕ್ಕೆ ಅಂಗನವಾಡಿ ಸಿಬ್ಬಂದಿ ನಡೆದುಕೊಳ್ಳುತ್ತಿರುವುದೆಲ್ಲವು ಸರಕಾರದ ಬೊಕ್ಕಸಕ್ಕೆ ಪೊಲಾಗುತ್ತಿದೆ ಎನ್ನುವ ಹಂತಕ್ಕೆ ತಲುಪಿದ್ದರಿಂದ ಬಡ ಮತ್ತು ಮದ್ಯಮ ವರ್ಗದ ಜನರಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಮಾಡುವ ಡಿಮಾಂಡುಗಳಿಗೆ ತಲೆದೂಗಿಸುವಂತಾಗಿರುವುದು ಆಶ್ಚರ್ಯವೇನಲ್ಲ.
ಅಂಗನವಾಡಿ ಕೇಂದ್ರಗಳ ಸ್ಥಿತಿಗತಿ:
ತಾಲೂಕಿನಲ್ಲಿ 421 ಅಂಗನವಾಡಿ ಕೇಂದ್ರಗಳಿದ್ದು ಅದರಲ್ಲಿ 227 ಸ್ವಂತ ಕಟ್ಟಡದಲ್ಲಿ ನಡೆಯುತ್ತಿದ್ದರೆ ಇನ್ನೂ 126 ಬಾಡಿಗೆ, 19 ಸಮುದಾಯ ಕೇಂದ್ರಗಳಲ್ಲಿ, 17 ಗ್ರಾಪಂ ಕಟ್ಟಡದಲ್ಲಿ, 32 ಸರಕಾರಿ ಶಾಲಾ ಕಟ್ಟಡದಲ್ಲಿ ನಡೆಯುತ್ತಿವೆ ಇದಕ್ಕೆ ಸಂಬಂಧಪಟ್ಟಂತೆ ತಾಲೂಕು ಪಂಚಾಯತಿ ಪ್ರತಿಯೊಂದು ಕೆಡಿಪಿ ಸಭೆಗಳಲ್ಲಿ ಕಟ್ಟಡಕ್ಕಾಗಿ ಅಲ್ಲದೆ ಸಿಬ್ಬಂದಿಯ ಕಾರ್ಯವೈಖರಿಯ ಬಗ್ಗೆ ಆರೋಪಗಳ ಚರ್ಚೆಯಾಗುತ್ತವೆ ಅದು ಆ ಸಭೆಗೆ ಮಾತ್ರ ಸೀಮಿತವಾಗುತ್ತವೆ ಮತ್ತೆ ಅದೇ ರಾಗ ಅದೇ ಹಾಡು ಎಂಬಂತೆ ನಡೆಯುತ್ತಿರುವುದು ಸವೇಸಾಮಾನ್ಯವಾಗಿದೆ ಎಂದು ಸಭೆಯಲ್ಲಿ ಕೆಡಿಪಿ ಸದಸ್ಯರು ರೇಗಾಡಿದರೂ ಕೂಡಾ ಯಾವುದೇ ಪ್ರಯೋಜನೆ ಕಂಡಿಲ್ಲ ಎನ್ನುವುದು ಎರಡು ಮಾತಿಲ್ಲ.
ಉಡಾಫೆ ಉತ್ತರ:
ಕೆಲವರು ಲಿಖಿತ ರೂಪದಲ್ಲಿ ಮಾಹಿತಿ ಕೇಳಿದರೆ ಕೆಲವೊಂದು ಕುಂಟು ನೆಪವೊಡ್ಡಿ ಸಮಯಮೀರಿ ಮಾಹಿತಿ ಒದಗಿಸಿದರು ಕೂಡ ಸಮಂಜಸವಲ್ಲದ ಮಾಹಿತಿ ನೀಡಿ ಕೈತೊಳೆದುಕೊಳ್ಳುವುದು ಹೊಸದೇನು ಅಲ್ಲ. ಮೇಲಾಧಿಕಾರಿಗಳ ಗಮನಕ್ಕೆ ತಂದಾಗ್ಯೂ ಕೂಡಾ ಅಲ್ಲಿಯೂ ಉಡಾಫೇ ಉತ್ತರಗಳೇ ಕೇಳಿ ಬರುತ್ತವೆ ಇದರಿಂದ ಜನರಿಗೆ ಪೂರಕವಾದ ಮಾಹಿತಿಗಳು ದೊರಕದೇ ರೋಸಿ ಹೋಗಿದ್ದಾರೆ ಎನ್ನುವುದು ಎಲ್ಲೆಡೆ ಕೇಳಿ ಬರುತ್ತಿವೆ.
ಆಕ್ರೋಶ:
ಗ್ರಾಮದಲ್ಲಿರುವ 126 ಅಂಗನವಾಡಿ ಕೇಂದ್ರಗಳು ಬಾಡಿಗೆ ಕೋಣೆಯಲ್ಲಿ ಅಲ್ಲದೆ ಕೆಲವು ಪತ್ರಾಸ್ ಶೆಡ್ಡಿನಲ್ಲಿ ನಡೆಸಲ್ಪಡುತ್ತಿವೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಿಲಾಪಿಯಲ್ಲಿ ದಾಖಲೆಗೂ ಮೀರಿ ಬಾಡಿಗೆಯ ರೂಪದಲ್ಲಿ ಹಣ ಸೋರಿಕೆಯಾಗುತ್ತಿದೆ ಜನಪ್ರತಿನಿಧಿಗಳು ಇಂತಹ ಪ್ರಮಾದಗಳನ್ನು ನಿಲ್ಲಿಸಲು ಮುಂದಾಗದಿರುವುದು ನಾಚಿಕೆಗೇಡಿನ ಸಂಗತಿ ಎಂದು ಗ್ರಾಮೀಣ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ: ಪಂಡಿತ್ ಯಂಪೂರೆ, ಸಿಂದಗಿ
ಸರಕಾರ ಶಿಕ್ಷಣ ಕ್ಷೇತ್ರದ ಶ್ರೇಯೋಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ರೂಪಿಸುತ್ತಿದೆ ಆದರೆ ಕೆಲವು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸರಕಾರಿ ಯೋಜನೆಗಳು ದಾಖಲೆ ರೂಪದಲ್ಲಿ ಆಗುತ್ತಿವೆ ವಿನಃ ಕಾರ್ಯ ರೂಪಕ್ಕೆ ಬರುತ್ತಿಲ್ಲ. ಇದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ತಲೆ ಎತ್ತಿ ನಿಂತಿರುವುದು ಆಶ್ವರ್ಯವೇನಲ್ಲ.
-ಸಾಯಬಣ್ಣಾ ದೇವರಮನಿ.
ಸಾಮಾಜಿಕ ಕಾರ್ಯಕರ್ತ
ಗ್ರಾಮೀಣ ಹಾಗೂ ಕೇಂದ್ರ ಸ್ಥಳಗಳಲ್ಲಿ ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೆ ಲಭ್ಯವಿರುವ ಜಾಗೆಯ ಉತಾರ ಪಡೆದು ಮೇಲಧಿಕಾರಿಗೆ ರವಾನೆ ಮಾಡುತ್ತೇವೆ ಸರಕಾರದಿಂದ ಅನುದಾನ ಬಂದ ನಂತರ ನಿರ್ಮಿಸುತ್ತೇವೆ ಅಲ್ಲಿಯವರೆಗೆ ಬಾಡಿಗೆ ರೂಪದಲ್ಲಿ ಖಾಸಗಿ ಕಟ್ಟಡಗಳಲ್ಲಿ ಅಂಗನವಾಡಿ ಕೇಂದ್ರಗಳು ನಡೆಯುತ್ತಿವೆ.
-ಬಸವರಾಜ ಜಿಗಳೂರ
ಸಿಡಿಪಿಓ ಸಿಂದಗಿ