ಹಿರಿಯ ಸಾಹಿತಿ , ಪತ್ರಕರ್ತ ಎಲ್. ಎಸ್. ಶಾಸ್ತ್ರಿಯವರನ್ನು ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನ ದ ೨೦೧೯ ನೇ ಸಾಲಿನ ” ಸಿರಿಗನ್ನಡ ಗೌರವ ” ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಬೆಳಗಾವಿ ಗಡಿ ಜಿಲ್ಲೆಯ ಕನ್ನಡ ಸಾಹಿತ್ಯ ಮತ್ತು ಪತ್ರಿಕಾ ಕ್ಷೇತ್ರದಲ್ಲಿ ನಾಲ್ಕು ದಶಕಗಳ ಕಾಲ ಸಲ್ಲಿಸಿದ ಸಾರ್ಥಕ ಸೇವೆಗಾಗಿ ಶಾಸ್ತ್ರಿಯವರನ್ನು ಆಯ್ಕೆ ಮಾಡಿರುವದಾಗಿ ಪ್ರತಿಷ್ಠಾನ ತಿಳಿಸಿದೆ.
೭೯ ವರ್ಷ ವಯಸ್ಸಿನ ಶಾಸ್ತ್ರಿಯವರು ಕಳೆದ ೬೦ ವರ್ಷಗಳಿಂದ ಪತ್ರಿಕೆ, ಕಲೆ ಸಾಹಿತ್ಯ ಸಂಸ್ಕೃತಿ ಕ್ಷೇತ್ರಗಳಲ್ಲಿ ನಿರಂತರ ಚಟುವಟಿಕೆಗಳನ್ನು ನಡೆಸುತ್ತ ಬಂದಿದ್ದು ೧೦೦ ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರಲ್ಲದೆ ಸಾಹಿತ್ಯ ಪತ್ರಿಕಾ ಸಂಘಟನೆಗಳನ್ನು ಸ್ಥಾಪಿಸಿ ಅಸಂಖ್ಯಾತ ಉದಯೋನ್ಮುಖರ ಬೆಳವಣಿಗೆಗೆ ಉತ್ತೇಜನವಿತ್ತಿದ್ದಾರೆ. ಅವರಿಗೆ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು , ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಬೆಳಗಾವಿ ಹಾಸ್ಯಕೂಟ, ಕ್ರಿಯಾಶೀಲ ಬಳಗಗಳು ಅಭಿನಂದನೆ ಸಲ್ಲಿಸಿವೆ.