ಇಂದು ಬೆಳಿಗ್ಗೆ ಹಸಿರೇ ಉಸಿರು ಸೋಷಿಯಲ್ ವೆಲ್ ಫೇರ್ ಸೊಸೈಟಿಯ ಪದಾಧಿಕಾರಿಗಳು ಹಾಗೂ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.
ಬ್ಯಾಡಗಿ-ಮೋಟೆಬೆನ್ನೂರ ರಸ್ತೆಯ 77 ಹುಣಸೆ ಮರಗಳು ಹಾಗೂ 15 ಬೇವಿನ ಮರಗಳನ್ನು ಜೈವಿಕ ವೈವಿಧ್ಯ ಕಾಯ್ದೆ 2002 ರ ಪ್ರಕಾರ ಸೆಕ್ಷನ್ 41(1) ರ ಅಡಿಯಲ್ಲಿ ಹುಣಸೆ ಮತ್ತು ಬೇವಿನ ಮರಗಳ ಸಂರಕ್ಷಿತ ಆವಾಸ ತಾಣ ಎಂದು ಘೋಷಣೆಯಾದ ನಿಮಿತ್ತ ಈ ಸನ್ಮಾನ ಹಮ್ಮಿಕೊಳ್ಳಲಾಗಿತ್ತು.
ಸಂಘದ ಪದಾಧಿಕಾರಿಗಳಿಗೆ ಹಾಗೂ ಅಧಿಕಾರಿಗಳಿಗೆ ಸನ್ಮಾನಿಸುವ ಕಾರ್ಯಕ್ರಮದಲ್ಲಿ ಶಾಸಕರಾದ ವಿರೂಪಾಕ್ಷಪ್ಪ ರು ಬಳ್ಳಾರಿ ಭಾಗಿಯಾಗಿದ್ದರು.