ಮೂಡಲಗಿ: ಗುಣಾತ್ಮಕ ಶಿಕ್ಷಣ ಕ್ರಿಯಾಶೀಲ ಎಂಬ ಪರಿಕಲ್ಪನೆಯೊಂದಿಗೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಮೂಡಲಗಿ ತಾಲೂಕಿನ ರಾಜಾಪೂರ ಗ್ರಾಮದಲ್ಲಿ ಜ್ಞಾನ ಗಂಗೋತ್ರಿ ಆಂಗ್ಲ ಮಾಧ್ಯಮ ಶಾಲೆಯು ಕಳೆದ 11 ವರ್ಷಗಳಿಂದ ಶ್ರಮಿಸುತ್ತಿದೆ.
2012 ರಲ್ಲಿ 140 ಮಕ್ಕಳಿಂದ ಆರಂಭವಾದ ಸಂಸ್ಥೆಯ ಅಕ್ಷರ ಕ್ರಾಂತಿ ಇಂದು 700 ಮಕ್ಕಳಿಂದ ಕೂಡಿ ಗ್ರಾಮೀಣ ಭಾಗದಲ್ಲಿ ಶಿಕ್ಷಣ ಕ್ರಾಂತಿಯನ್ನು ಮಾಡುತ್ತಿರುವ ಸಂಸ್ಥೆಯಾಗಿ ಬೆಳೆದು ನಿಂತಿದೆ. ನಗರ ಪ್ರದೇಶದ ಮಕ್ಕಳು ಪಡೆಯುವಂತಹ ಗುಣಮಟ್ಟದ ಹಾಗೂ ಕ್ರಿಯಾಶೀಲ ಶಿಕ್ಷಣ ಗ್ರಾಮೀಣ ಮಕ್ಕಳಿಗೂ ದೊರೆಯಬೇಕು ಎಂಬುದು ಈ ಸಂಸ್ಥೆಯ ಮುಖ್ಯ ಧ್ಯೇಯ. ಅದನ್ನು ಈಗ ಜ್ಞಾನ ಗಂಗೋತ್ರಿ ಸಂಸ್ಥೆ ಈಡೇರಿಸಿದೆ. ಮಕ್ಕಳು ಕೇವಲ ಪಠ್ಯಪುಸ್ತಕ, ಪರೀಕ್ಷೆ, ಹೋಂವರ್ಕ್, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಸೀಮಿತಗೊಳ್ಳದೆ ಜೀವನದಲ್ಲಿ ಎದುರಾಗುವ ಎಲ್ಲ ಸವಾಲುಗಳನ್ನು ಅವರು ಧೈರ್ಯವಾಗಿ ಎದುರಿಸುವ ಶಕ್ತಿ ತುಂಬುವುದೇ ಈ ಶಾಲೆಯ ವೈಶಿಷ್ಟ್ಯವಾಗಿದೆ. ಮಕ್ಕಳು ಶಿಸ್ತು ಹಾಗೂ ನೈತಿಕತೆಯೊಂದಿಗೆ ಬೆಳೆಯಬೇಕು. ಕೇವಲ ತಮ್ಮ ಉದ್ಧಾರ ಮಾಡಿಕೊಳ್ಳದೆ ಇಡೀ ದೇಶವನ್ನೇ ಪ್ರಗತಿ ಪಥದತ್ತ ಕೊಂಡೊಯ್ಯುವ ನಾಗರಿಕರಾಗಬೇಕು ಎಂಬುದು ಶಾಲೆಯ ಆಡಳಿತ ಮಂಡಳಿ ಮಹದಾಸೆಯಾಗಿದೆ.
ಮಕ್ಕಳು ಕೇವಲ ಅಭ್ಯಾಸಕ್ಕೆ ಅಂಟಿಕೊಳ್ಳದೆ ಇತರೇ ರಚನಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಿ ಒಬ್ಬ ಉತ್ತಮ ಪ್ರಜೆಯಾಗಿ ಹೊರಹೊಮ್ಮಬೇಕು ಎಂಬ ಉದ್ದೇಶದಿಂದ ಆಡಳಿತ ಮಂಡಳಿ ನಿತ್ಯ ಶ್ರಮಿಸುತ್ತಿದೆ. ಮಕ್ಕಳಲ್ಲಿ ಕಲಿಕೆಯ ಜೊತೆಗೆ ಸಂಗೀತ, ಚಿತ್ರಕಲೆ, ನಾಟ್ಯಕಲೆ ಸೇರಿದಂತೆ ಮತ್ತಿತರ ಸೃಜನಾತ್ಮಕ ರಂಗಗಳಲ್ಲಿ ಹಾಗೂ ಕ್ರೀಡೆಗಳಲ್ಲಿ ಜ್ಞಾನ ಗಂಗೋತ್ರಿ ಶಾಲೆಯ ಮಕ್ಕಳು ಮೊದಲಿಗರಾಗಿರಬೇಕು ಎಂಬುದು ಶಿಕ್ಷಕರಾದ ರಮೇಶ ಗುಂಡಪ್ಪಗೋಳ ಅವರ ಬಯಕೆ.
ಸುಂದರ ಪರಿಸರ, ಅನುಭವಿ ಬೋಧಕ ಸಿಬ್ಬಂದಿ, ಆಧುನಿಕ ಕಲಿಕಾ ಸಾಮಗ್ರಿ, ಸುಸಜ್ಜಿತ ಗ್ರಂಥಾಲಯ, ಆಟದ ಮೈದಾನ ಪ್ರಯೋಗಾಲಯವಿದ್ದು, ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಶಿಕ್ಷಣ ಕಲಿಸುತ್ತಿರುವ ಜ್ಞಾನ ಗಂಗೋತ್ರಿ ಶಾಲೆ ಪ್ರಯತ್ನ ನಿಜಕ್ಕೂ ಶ್ಲಾಘನೀಯವಾಗಿದೆ. ಬಹುಮಾನ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ “ಸ್ಪಂದನ” ಜ.5 ರಂದು ನಡೆಯಲಿದೆ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಬೆಳಗಾವಿ ಸುವರ್ಣ ಸೌಧದ ಮಾದರಿಯಲ್ಲಿ ಹಾಕಿರುವ ಭವ್ಯವಾದ ವೇದಿಕೆಯ ಮೇಲೆ ಜರುಗಲಿವೆ.
ಸರ್ಕಾರದ ವಿವಿಧ ಉನ್ನತ ಹುದ್ದೆಗಳಲ್ಲಿರುವಂತಹ ಅಧಿಕಾರಿ ವೃಂದದವರು, ಪಾಲಕರು, ಪೋಷಕರು, ಗ್ರಾಮದ ಗುರು-ಹಿರಿಯರು, ಯುವಕರು ಸೇರಿದಂತೆ ಸಾವಿರಾರು ಜನರ ಮಧ್ಯೆ ಈ ಭವ್ಯವಾದ ಕಾರ್ಯಕ್ರಮ ನೆರವೇರಲಿದೆ.
ಜ್ಞಾನವೇ ಜಗತ್ತಿಗೆ ಬೆಳಕು ಎನ್ನುವಂತಹ ನಿಟ್ಟಿನಲ್ಲಿ ವಿದ್ಯಾದಾನ ಮಾಡುತ್ತಿರುವ ಜ್ಞಾನ ಗಂಗೋತ್ರಿ ಶಿಕ್ಷಣ ಸಂಸ್ಥೆಯ ಕೆಲಸ ಶ್ಲಾಘನೀಯ, ದುಡ್ಡಿಗಾಗಿ ಶಿಕ್ಷಣ ದಾನ ಮಾಡುವ ಸಂಸ್ಥೆ ಇದಲ್ಲ, ಗ್ರಾಮೀಣ ಬಡ ಪ್ರತಿಭಾವಂತ ಮಕ್ಕಳಿಗೆ ಪೂರಕವಾದ, ಪ್ರೇರಕವಾದ ಅವಶ್ಯಕವಾದ ಶಿಕ್ಷಣ ನೀಡುವ ಸಂಸ್ಥೆ ಇದಾಗಿದೆ.
ಶ್ರೀ ಅಮರೇಶ್ವರ ಮಹಾರಾಜರು
ಸಿದ್ಧಗಿರಿ ಸಿದ್ಧಾಶ್ರಮ ಕವಲಗುಡ್ಡ-ಅಥಣಿ
ಕಳೆದ 11 ವರ್ಷದಲ್ಲಿ ಜ್ಞಾನ ಗಂಗೋತ್ರಿ ಶಾಲೆ ಗ್ರಾಮೀಣ ಭಾಗದ ಮಕ್ಕಳಿಗೆ ಆಂಗ್ಲ ಮಾಧ್ಯಮದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಾ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ರಾಜ್ಯ ಮಟ್ಟದ ವರೆಗೂ ಸಾಧನೆ ಮಾಡಿದ ಹೆಗ್ಗಳಿಕೆ ಇದೆ. ಪ್ರತಿ ವರ್ಷವೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುತ್ತಲಿದೆ. ಮುಂದಿನ ದಿನದಲ್ಲಿ ಈ ಶಾಲೆಯಿಂದ ದೇಶ ಬೆಳಗುವ ಭವಿಷ್ಯತ್ತಿನ, ಮಿನುಗುತಾರೆಗಳು ಹೊರ ಹೊಮ್ಮಲೆಂದು ಆಶಿಸುತ್ತೇನೆ.
ಅರಿಹಂತ ಬಿರಾದಾರ ಪಾಟೀಲ,
ವಿಷಯ ಪರಿವೀಕ್ಷಕರು, ಉಪನಿರ್ದೇಶಕರ ಕಾರ್ಯಾಲಯ ಚಿಕ್ಕೋಡಿ.