Homeಸುದ್ದಿಗಳುಎ.ಎಂ.ನಾಗಯ್ಯ ಅವರಿಗೆ ರಾಜ್ಯಮಟ್ಟದ ಕನ್ನಡದ ಕಣ್ಮಣಿ ಪ್ರಶಸ್ತಿ

ಎ.ಎಂ.ನಾಗಯ್ಯ ಅವರಿಗೆ ರಾಜ್ಯಮಟ್ಟದ ಕನ್ನಡದ ಕಣ್ಮಣಿ ಪ್ರಶಸ್ತಿ

ಮೈಸೂರು – ನಗರದ ಜನತಾನಗರ ವೃತ್ತದಲ್ಲಿರುವ ತರಳಬಾಳು ಶಿಕ್ಷಣ ಸಂಸ್ಥೆಯ ಕನ್ನಡ ಉಪನ್ಯಾಸಕರಾದ ಎ.ಎಂ.ನಾಗಯ್ಯ ಅವರಿಗೆ 2023ನೇ ಸಾಲಿನಲ್ಲಿ ಚಿತ್ರದುರ್ಗದ ತಾರಾಮಂಡಲ ಸಿರಿಗನ್ನಡ ಬಳಗ ಆಯೋಜಿಸಿದ್ದ ಕನ್ನಡ ಪ್ರತಿಭಾ ಪರೀಕ್ಷೆಯಲ್ಲಿ ಭಾಗವಹಿಸಿ ಅತ್ಯುತ್ತಮ ರಾಜ್ಯಮಟ್ಟದ ಉತ್ತಮ ಸಂಘಟಕರು ಹಾಗೂ ಕನ್ನಡದ ಕಣ್ಮಣಿ ಎಂಬ ಪ್ರಶಸ್ತಿ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.

ಎ.ಎಂ.ನಾಗಯ್ಯರವರು ವಿಜಯನಗರ ಜಿಲ್ಲೆ ಕೊಟ್ಟೂರು ಗ್ರಾಮದವರು. ಕಳೆದ 15 ವರ್ಷಗಳಿಂದ ತರಳಬಾಳು ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಉಪನ್ಯಾಸಕರಾಗಿ, ಜಾನಪದ ಗಾಯಕರಾಗಿ, ಚಿತ್ರಕಲೆ ಹಾಗೂ ಬರವಣಿಗೆಯ ಕೌಶಲ್ಯದಲ್ಲಿ ಅತ್ಯುತ್ತಮ ಪ್ರಶಸ್ತಿ ಹಾಗೂ ಪುರಸ್ಕಾರವನ್ನು ಪಡೆದಿರುತ್ತಾರೆ.

RELATED ARTICLES

Most Popular

error: Content is protected !!
Join WhatsApp Group