Homeಸುದ್ದಿಗಳುಪ್ರಧಾನ ಮಂತ್ರಿಗಳಿಗೆ ಪತ್ರ ಬರೆದ ವಿದ್ಯಾರ್ಥಿಗಳು

ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದ ವಿದ್ಯಾರ್ಥಿಗಳು

ಹಾನಗಲ್: ಹಾನಗಲ್ ತಾಲ್ಲೂಕಿನ ಕಾಮನ ಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಇತ್ತೀಚೆಗೆ ಭಾರತದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಭಾರತದ ಪ್ರಧಾನ ಮಂತ್ರಿಗಳ ಕಛೇರಿಗೆ ಪತ್ರ ಬರೆದರು.

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ತಮ್ಮ ಪ್ರಾಣ ಕಳೆದುಕೊಂಡ ತೆರೆ ಮರೆಯ ಕಾಯಿಯಂತೆ ಹೋರಾಟ ನಡೆಸಿದ ಹಾವೇರಿ ಜಿಲ್ಲೆಯ ಖ್ಯಾತ ಸ್ವಾತಂತ್ರ್ಯ ಹೋರಾಟಗಾರ ಸಿದ್ದಪ್ಪ ಕಂಬಳಿಯವರ ಕುರಿತು ಪತ್ರದಲ್ಲಿ ಬರೆದರು. ಸರ್ ಸಿದ್ದಪ್ಪ ಕಂಬಳಿಯವರ ಜೀವನ ಮತ್ತು ಸ್ವಾತಂತ್ರ್ಯಕ್ಕಾಗಿ ಅವರ ಕೊಡುಗೆಗಳನ್ನು ಸ್ಮರಿಸುವ ಪತ್ರ ಬರೆದರು.

‌ಈ ಕಾರ್ಯಕ್ರಮವನ್ನು ಆಯೋಜಿಸಲು ಭಾರತೀಯ ಅಂಚೆ ಇಲಾಖೆಯ ಸಿಬ್ಬಂದಿ ಶ್ರೀಮತಿ ದೀಪಾ ಗೋನಾಳ ಸಲಹೆ ನೀಡಿದರು. ಅವರ ಸಲಹೆಯಂತೆ ಶಾಲೆಯಲ್ಲಿ ನೂರಾರು ತೆರೆ ಮರೆಯ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಶಿಕ್ಷಕರಾದ ಶ್ರೀ ಇಂಗಳಗಿ ದಾವಲಮಲೀಕ ಮಾಹಿತಿ ನೀಡಿದರು.

ನಾಲ್ಕು ಮತ್ತು ಐದನೆಯ ತರಗತಿಯ ವಿದ್ಯಾರ್ಥಿಗಳು ಭಾರತದ ಪ್ರಧಾನ ಮಂತ್ರಿಗಳಿಗೆ ಸರ್ ಸಿದ್ದಪ್ಪ ಕಂಬಳಿಯವರ ಕುರಿತು ಪತ್ರ ಬರೆದರು. ಶಾಲೆಯ ಮುಖ್ಯ ಶಿಕ್ಷಕರಾದ ಎಸ್ ಎನ್ ಸೂಡಂಬಿ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ಮಾಡಿದರು.

ವಿದ್ಯಾರ್ಥಿಗಳನ್ನು ಪ್ರತ್ಯೇಕ ತರಗತಿಯಲ್ಲಿ ಕೂರಿಸಿ ಆಂಗ್ಲ ಭಾಷೆಯಲ್ಲಿ ಬರೆಯುವಂತೆ ಪ್ರೋತ್ಸಾಹಿಸಿದರು. ತರಗತಿಗಳ ಮೇಲ್ವಿಚಾರಣೆಯನ್ನು ಸಹ ಶಿಕ್ಷಕರಾದ ಡಿ ಹೆಚ್ ಮಾದರ ಹಾಗೂ ಶ್ರೀಮತಿ ಆರ್ ಪಿ ಕುಂಬಾರ ವಹಿಸಿದ್ದರು.

ವಿದ್ಯಾರ್ಥಿಗಳು ಬರೆದ ಪತ್ರಗಳನ್ನು ಆಯ್ಕೆ ಮಾಡಿ ಕೇಂದ್ರ ಸರ್ಕಾರದ ಸಾಮಾಜಿಕ ಜಾಲತಾಣದಲ್ಲಿ ಇಂದೀಕರಿಸುವ ಮತ್ತು ಎಲ್ಲ ಪತ್ರಗಳನ್ನು ಅಂಚೆ ಕಚೇರಿಗೆ ರವಾನಿಸು ಜವಾಬ್ದಾರಿಯನ್ನು ಶಿಕ್ಷಕ ಇಂಗಳಗಿ ದಾವಲಮಲೀಕ ಅವರು ನಿರ್ವಹಿಸಿದರು.

RELATED ARTICLES

Most Popular

error: Content is protected !!
Join WhatsApp Group