ಸಿಂದಗಿ; ಪ್ರಧಾನಿ ನರೇಂದ್ರ ಮೋದಿಯವರ ಕಾಶಿ ಕನಸಿನ ಕೂಗಾದ ದಿವ್ಯ ಕಾಶಿ ಭವ್ಯ ಕಾಶಿ ಎಂಬ ಶೀರ್ಷಿಕೆಯಡಿಯಲ್ಲಿ ಇಡೀ ದೇಶಾದ್ಯಂತ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಂಡಲ ಅಧ್ಯಕ್ಷ ಈರಣ್ಣ ರಾವೂರ್ ಹೇಳಿದರು.
ಪಟ್ಟಣದ ಶ್ರೀ ಆದೇಶ ಸಂಸ್ಥಾನ ಹಿರೇಮಠದಲ್ಲಿ ಭಾರತೀಯ ಜನತಾ ಪಾರ್ಟಿ ಮಂಡಲ ವತಿಯಿಂದ ದಿವ್ಯ ಕಾಶಿ ಭವ್ಯ ಕಾಶಿ ಎಂಬ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರ ಕನಸಿನ ಕೂಗು ದಿವ್ಯ ಕಾಶಿ ಭವ್ಯ ಕಾಶಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ, ಒಟ್ಟು ಆರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಮೊದಲನೇ ಕಾರ್ಯಕ್ರಮ ಸ್ವಚ್ಛತೆಯ ಕಾರ್ಯದಲ್ಲಿ ತಾವೆಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸುವುದರೊಂದಿಗೆ ಯಾರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೆ ಕಾರಣಿಕರ್ತರು ಆಗಬೇಕೆಂದು ಪಕ್ಷದ ಪದಾಧಿಕಾರಿಗಳಿಗೆ ಸೂಚಿಸಿದರು.
ಡಾ. ಚಂದ್ರಶೇಖರ ಮಹಾಸ್ವಾಮಿಗಳು ಹಾಗೂ ಪರಮ ಪೂಜ್ಯ ನಾಗರತ್ನ ವೀರಾಜೇಂದ್ರ ಮಹಾಸ್ವಾಮಿಗಳು ಸಂಸ್ಥಾನ ಹಿರೇಮಠ ಸಿಂದಗಿ ಅವರು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಲಿಂಬೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಅಶೋಕ ಅಲ್ಲಾಪೂರ ಅವರು ಮಾತನಾಡಿ, ದೇಶ ಕಂಡ ಅತ್ಯಂತ ಶ್ರೇಷ್ಠ ಪ್ರಧಾನಮಂತ್ರಿಯವರ ಕನಸು ಸಾಕಾರಗೊಳಿಸುವಲ್ಲಿ ತಾವೆಲ್ಲರೂ ಪ್ರಮುಖ ಪಾತ್ರ ವಹಿಸಬೇಕೆಂದು ಹೇಳಿದರು.ನಮ್ಮ ದೇಶದ ಸಂಸ್ಕೃತಿಯನ್ನು ಉಳಿಸುವ ಹಾಗೂ ಬೆಳೆಸುವ ಕಾರ್ಯದಲ್ಲಿ ಜಗಮೆಚ್ಚಿದ ಹಾಗೂ ಜಗದ್ವಿಖ್ಯಾತಿ ಪಡೆದ ಗೌರವಾನ್ವಿತ ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ಉತ್ತಮವಾದಂತಹ ಹೆಜ್ಜೆಯನ್ನು ಹಾಕುತ್ತಿದ್ದಾರೆ ಹಾಗಾಗಿ ಕಾಶಿ ರಾಮೇಶ್ವರ ಲಿಂಗಗಳ ದರ್ಶನ ನೀಡುವುದು ಹಾಗೂ ದಿವ್ಯ ಕಾಶಿ ಭವ್ಯ ಕಾಶಿ ಎಂಬ ಶೀರ್ಷಿಕೆಯಡಿಯಲ್ಲಿ ಹಾಗೂ ಅಭಿಯಾನದ ಅಡಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತೋಷದ ವಿಷಯ ಹಾಗೂ ಈ ಸ್ವಚ್ಛತಾ ಕಾರ್ಯವನ್ನು ಮೋದಿಜಿಯವರ ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಮುನ್ನಡೆಯೋಣ ಎಂದರು.
ಈ ಕಾರ್ಯಕ್ರಮದ ಸಂಚಾಲಕ ಎಸ್ ಆರ್ ಪಾಟೀಲ ನಿರೂಪಿಸಿದರು ಹಾಗೂ ದಿವ್ಯ ಕಾಶಿ ಭವ್ಯ ಕಾಶಿಯ ತಾಲೂಕು ಸಂಚಾಲಕ ಸಿದ್ದಲಿಂಗಯ್ಯ ಹಿರೇಮಠ ಅವರು ವಂದಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ವಕ್ತಾರ ರಾಜಶೇಖರ ಪೂಜಾರಿ, ಪ್ರಧಾನ ಕಾರ್ಯದರ್ಶಿ ನಿಂಗಣ್ಣ ಬಗಲಿ, ಮಾಧ್ಯಮ ಪ್ರಮುಖ ಸುದರ್ಶನ ಜಂಗಣಿ, ಕೆಡಿಪಿ ಸದಸ್ಯರಾದ ಶಿವಕುಮಾರ ಬಿರಾದಾರ, ಕೆಡಿಪಿ ಸದಸ್ಯ ಅನುಸೂಯಾ ಪಾರಗೊಂಡ, ಸೇರಿದಂತೆ ಪಕ್ಷದ ಪದಾಧಿಕಾರಿಗಳು ಹಿರಿಯರು ಕಾರ್ಯಕರ್ತರು ಮತ್ತು ಹಿತೈಷಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.