ಸಿಂದಗಿ: ದಾಬಾ ಮಾಲೀಕನೋರ್ವ ತನ್ನ ದಾಬಾದಲ್ಲೇ ಕೆಲಸ ನಿರ್ವಹಿಸುವ ಕೆಲಸಗಾರನ ಅಪ್ರಾಪ್ತೆ ಮಗಳ ಮೇಲೆ ಅತ್ಯಾಚಾರ ಮಾಡಿದ ಪ್ರಕರಣದ ಆರೋಪಿ ನೇಣಿಗೆ ಶರಣಾದ ಘಟನೆ ಹೊಸ ತಿರುವು ಕಂಡಿದೆ.
ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಯಂಕಂಚಿ ಗ್ರಾಮದಲ್ಲಿರುವ ದಿಲ್ದಾರ್ ದಾಬಾದ ಮಾಲೀಕ ದೇವಿಂದ್ರ ಸಂಗೋಗಿ ಆಗಷ್ಟ 23 ಮತ್ತು 24ರಂದು ಅತ್ಯಾಚಾರವೆಸಗಿದ್ದಾನೆ ಎಂದು ಅಪ್ರಾಪ್ತ ಬಾಲಕಿಯ ತಂದೆ ಅ. 27ರಂದು ದೂರು ದಾಖಲಿಸಿದ್ದರು ಈ ಹಿನ್ನೆಲೆಯಲ್ಲಿ ಆರೋಪಿ ದೇವೇಂದ್ರ ಸಂಗೋಗಿಯನ್ನು ಬಂಧಿಸಿ ಜೈಲಿನಲ್ಲಿಡಲಾಗಿತ್ತು.
ಭಾನುವಾರ ಬೆಳಿಗ್ಗೆ ಶೌಚಾಲಯಕ್ಕೆ ಹೋಗುತ್ತೇನೆ ಎಂದವನು ಅನುಮಾನಾಸ್ಪದ ರೀತಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಪ್ರಯತ್ನಿಸಿದ್ದಾನೆ ಆದರೆ ಇಲಾಖೆ ಸಿಬ್ಬಂದಿ ನೋಡಿ ಆತನನ್ನು ಜಿಲ್ಲಾಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ. ಆದಾಗ್ಯೂ ಈ ಪ್ರರಕಣ ಸಾಕಷ್ಟು ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿದೆ.
ಆರೋಪ; ಈ ಪ್ರಕರಣಕ್ಜೆ ಸಂಬಂದಿಸದಂತೆ ವಿವಿಧ ಸಂಘಟನೆಗಳು ಹಾಗೂ ಕುಟುಂಬಸ್ಥರು ಪೊಲೀಸ ಸಿಬ್ಬಂದಿಗಳು ನೀಡಿದ ಕಿರಕುಳದಿಂದ ಆರೋಪಿ ಮೃತ ಪಟ್ಟಿದ್ದಾನೆ ಈ ಪ್ರಕರಣವನ್ನು ಸಿಓಡಿಗೆ ಒಪ್ಪಿಸಿ ಸೂಕ್ತ ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಿ ಪೊಲೀಸ ಠಾಣೆಯ ಎದುರು ಪ್ರತಿಭಟನೆ ನಡೆಸಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು,
ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಚಾಲಕ ವೈ.ಸಿ.ಮಯೂರ ಮಾತನಾಡಿ, ಪ್ರಕರಣ ಏನೇ ದಾಖಲಾಗಲಿ ಸೂಕ್ತ ತನಿಖೆ ಮಾಡಿ ಶಿಕ್ಷೆಗೊಳಪಡಿಸಲಿ ಆದರೆ ವಿಚಾರಣೆ ನೆಪದಲ್ಲಿ ಅಧಿಕಾರಿಗಳು ಮನಬಂದಂತೆ ಥಳಿಸಿದ್ದರಿಂದ ಅನುಮಾಸ್ಪದ ರೀತಿಯಲ್ಲಿ ಸಾವನಪ್ಪಿರುವುದು ಖಂಡನಾರ್ಹವಾಗಿದೆ.
ಜಿಲ್ಲಾ ವರಿಷ್ಠಾಧಿಕಾರಿ ಆನಂದಕುಮಾರ ಘಟನಾ ಸ್ಥಳಕ್ಕೆ ಬೇಟಿ ನೀಡಿ, ಈ ಪ್ರಕರಣಕ್ಕೆ ಸಂಬಂಧಿಸಿದ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಿ ಕಾನೂನು ರೀತಿಯಲ್ಲಿ ವಿಚಾರಣೆ ಒಳಪಟ್ಟಿದ್ದರು ಅಷ್ಟರಲ್ಲಿ ಈ ಆರೋಪಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಇದರಲ್ಲಿ ಯಾವ ಅಧಿಕಾರಿ ತಪ್ಪಿದೆಯೋ ಈ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿ ತಪ್ಪಿಸ್ಥರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತೇನೆ ಎಂದು ಸಾಂತ್ವನ ಹೇಳುವೆ ವಿನಃ ಸದ್ಯ ಕ್ರಮ ತೆಗೆದುಕೊಳ್ಳಕ್ಕಾಗಲ್ಲ ಇದರಲ್ಲಿ ಎಲ್ಲವನ್ನು ಸೂಕ್ಮವಾಗಿ ಪರಿಶೀಲಿಸಿ ಯಾವುದೇ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪ್ರಕಾಶ ಹಿರೇಕುರಬರ, ಡಾ.ದಸ್ತಗೀರ ಮುಲ್ಲಾ, ಶ್ರೀಶೈಲ ಕವಲಗಿ, ಶಿವಾಜಿ ಮೇಟಗಾರ, ಸಂತೋಷ ಮಣಿಗೇರಿ,ಶರಣು ಚಲವಾದಿ, ಮಂಜು ಯಂಟಮಾನ, ಅಖೀಲ ಮನಿಯಾರ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿದ್ದರು.