ಯರಗಟ್ಟಿ: “ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಶಿಕ್ಷಕರ ಓದುವ ಪ್ರಕ್ರಿಯೆ ನಿರಂತರವಾಗಿರಬೇಕು. ಶಿಕ್ಷಕರಿಗೆ ಸೇವೆಯಲ್ಲಿನ ವೈಯುಕ್ತಿಕ ಸಮಸ್ಯೆಗೆ ಇಲಾಖೆಯಿಂದ ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳಲು ಗುರುಸ್ಪಂದನ ಇದೊಂದು ಅದ್ಭುತ ಕಾರ್ಯಕ್ರಮ.
ಶಿಕ್ಷಕರ ಕಾರ್ಯ ಉತ್ತೇಜನಕಾರಿಯಾಗಿರಬೇಕು. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ತಾಲೂಕಿಗೆ ಉತ್ತಮ ಹೆಸರು ತರಬೇಕು. ತಮ್ಮ ಸಮಸ್ಯೆಗಳಿಗೆ ಇಲಾಖೆ ಸದಾ ಸ್ಪಂದನೆ ನೀಡುವುದು. ನನ್ನ ಎಲ್ಲ ಸಿಬ್ಬಂದಿಗಳು ಇಂದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಸಂಘಟನೆ ಕೂಡ ನಮಗೆ ಬೆಂಬಲವಾಗಿ ನಿಂತು ಇಂತಹ ಕಾರ್ಯದಲ್ಲಿ ಕೈಜೋಡಿಸುತ್ತಿದೆ” ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅರ್ಜುನ ಕಂಬೋಗಿ ಮಾತನಾಡಿದರು.
ಅವರು ಯರಗಟ್ಟಿ ವಲಯದ ಶಿವಾಪುರ, ಯರಜರ್ವಿ, ಸತ್ತೀಗೇರಿ, ಯರಗಟ್ಟಿ, ತಲ್ಲೂರ ಕ್ಲಸ್ಟರ ಮಟ್ಟದ (ಎಸ್.ಎಸ್.ಎ ಹೊರತು ಪಡಿಸಿ) ಶಿಕ್ಷಕರಿಗೆ ಗುರು ಸ್ಪಂದನ ಕಾರ್ಯಕ್ರಮವನ್ನು ಯರಗಟ್ಟಿಯ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷರಾದ ಎಚ್.ಆರ್.ಪೆಟ್ಲೂರ “ಶಿಕ್ಷಕರ ಸಂಘಟನೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಒಂದಕ್ಕೊಂದು ಪೂರಕವಾಗಿ ಶಿಕ್ಷಕರ ಕಾರ್ಯ ಮಾಡುತ್ತಿವೆ.
ಶಿಕ್ಷಕ ಸ್ನೇಹಿಯಾದ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಮ್ಮ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಜೊತೆಗೆ ಗುಣಾತ್ಮಕ ಶಿಕ್ಷಣಕ್ಕೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದು ಅವರಿಗೆ ಸಂಘಟನೆ ಪರವಾಗಿ ಧನ್ಯವಾದಗಳನ್ನು ಅರ್ಪಿಸುವೆನು.
ಇನ್ನು ಯರಗಟ್ಟಿ ವಲಯದ ಎಲ್ಲ ಗುರುಗಳು ಗುರುಮಾತೆಯವರು ತಮ್ಮ ಸೇವಾ ಪುಸ್ತಕಗಳನ್ನು ಸರಿಯಾಗಿ ಇಂದು ಪರಿಶೀಲಿಸಿಕೊಂಡು ಏನಾದರೂ ತಿದ್ದುಪಡಿ ಇದ್ದಲ್ಲಿ ಸೂಕ್ತವಾಗಿ ತಿಳಿಸಿ ಸರಿಪಡಿಸಿಕೊಳ್ಳಲು ತಮಗೆ ಇದೊಂದು ಅವಕಾಶ. ಇದನ್ನು ಸದ್ಬಳಕೆ ಮಾಡಿಕೊಳ್ಳಿರಿ. ಗುರುಭವನ ಕಾಮಗಾರಿ ಕೂಡ ಪ್ರಗತಿಪಥದಲ್ಲಿ ಸಾಗಿದೆ. ಅದಕ್ಕೆ ಬೇಕಾದ ಅನುದಾನದ ಕ್ರೂಢೀಕರಣಕ್ಕೂ ಕೂಡ ಶಾಸಕರೂ ಮತ್ತು ವಿಧಾನಸಭಾ ಉಪಸಭಾಧ್ಯಕ್ಷರಾದ ಆನಂದ ಮಾಮನಿಯವರ ಪ್ರಯತ್ನ ಮರೆಯಲಾಗದ್ದು ಈ ದಿಸೆಯಲ್ಲಿ ಎಲ್ಲ ಮಹನೀಯರಿಗೂ ಸಂಘಟನೆಯ ಪರವಾಗಿ ಕೃತಜ್ಞತೆ ಸಲ್ಲಿಸುವೆಹಾಗೆಯೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆಯಿಂದ ಶಾಲೆಗಳ ಆಟದ ಮೈದಾನ ಕುಡಿಯುವ ನೀರು, ಶೌಚಾಲಯ, ಶಾಲಾ ದುರಸ್ತಿ,ಕೊಠಡಿಗಳ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಮಂಜೂರು ಮಾಡಿಸುವಲ್ಲಿ ಸನ್ಮಾನ್ಯ ಶಾಸಕರು ಮತ್ತು ವಿಧಾನಸಭಾ ಉಪ ಸಭಾಧ್ಯಕ್ಷರಾದ ಆನಂದ ಮಾಮನಿಯವರ ಸಹಕಾರ ಮರೆಯಲಾರದ್ದು.
ಈ ದಿಸೆಯಲ್ಲಿ ಎಲ್ಲ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳು ಮತ್ತು ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳ ಸಹಕಾರ ಉತ್ತಮವಾಗಿದೆ ಈ ದಿಸೆಯಲ್ಲಿ ನಮ್ಮ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇಲಾಖೆಯ ಶಾಲೆಗಳ ಅವಶ್ಯಕ ಕಾಮಗಾರಿಗಳ ಕುರಿತು ಪಟ್ಟಿಯನ್ನು ಕೂಡ ತಾಲೂಕ ಪಂಚಾಯತಿಗೆ ಒದಗಿಸುವ ಮೂಲಕ ಶೈಕ್ಷಣಿಕ ಅಭಿವೃದ್ದಿಗೆ ಕೈ ಜೋಡಿಸಿದ್ದು ಇದರ ಸದುಪಯೋಗವನ್ನು ಎಲ್ಲ ಶಾಲೆಗಳ ಮುಖ್ಯೋಪಾಧ್ಯಾಯರು ಪಡೆಯಬೇಕು.” ಎಂದು ಕರೆ ನೀಡಿದರು.
ಅಕ್ಷರದಾಸೋಹ ಸಹಾಯಕ ನಿರ್ದೇಶಕರಾದ ಸಿ.ವೈ.ತುಬಾಕಿ ಮಾತನಾಡಿ“ ಅಕ್ಷರದಾಸೋಹ ಯೋಜನೆ ನಮ್ಮ ತಾಲೂಕಿನಲ್ಲಿ ಉತ್ತಮ ರೀತಿಯಲ್ಲಿ ಜರಗುತ್ತಿದ್ದು. ವಿವಿಧ ಬಗೆಯ ಭೋಜನವನ್ನು ತಯಾರಿಸಿ ಮಕ್ಕಳಿಗೆ ಗುಣಮಟ್ಟದ ಆಹಾರ ನೀಡುತ್ತಿರುವುದು ಶ್ಲಾಘನೀಯ. ಜೊತೆಗೆ ರಾಜ್ಯದಲ್ಲಿಯೇ ಬಿಸಿಯೂಟದ ಮಾಹಿತಿಯನ್ನು ಹಾಜರಾತಿ ತತ್ರಾಂಶದಲ್ಲಿ ನಿಗದಿತ ಸಮಯದಲ್ಲಿ ಒದಗಿಸುವ ಮೂಲಕ ಮೊದಲ ಸ್ಥಾನಕ್ಕೆ ತಂದಿರುವ ಎಲ್ಲರಿಗೂ ಕೃತಜ್ಞತೆಗಳು.” ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಉಪಾಧ್ಯಕ್ಷರಾದ ಎಂ.ಎಸ್.ಕೋಳಿ ಮಾತನಾಡಿ, “ ಸೇವಾ ಪುಸ್ತಕದ ಮಹತ್ವ. ಇಂದು ಶಿಕ್ಷಕರು ಪರಿಶೀಲಿಸಬೇಕಾದ ಮಹತ್ವದ ಅಂಶಗಳು ಯಾವವು ಎಂಬುದನ್ನು ಸವಿಸ್ತಾರವಾಗಿ ಈ ಸಂದರ್ಭದಲ್ಲಿ ತಿಳಿಸಿದರು. ವೇದಿಕೆಯಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಂ.ಬಿ.ಬಳಿಗಾರ.ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳಾದ ಡಾ.ಬಿ.ಕೆ.ಪಡೆಪ್ಪನವರ, ಮಲ್ಲಪ್ಪ ಯರಜರ್ವಿ, ಎಸ್.ಎನ್.ಪಾಶ್ಚಾಪೂರ, ನಿರಂಜನ ಮೆಳವಂಕಿ, ಗುರಮಾತೆ ಎನ್.ಬಿ.ರೇವಪ್ಪನವರ. ಐ.ಪಿ.ಕಿತ್ತೂರ. ಸಹಕಾರ್ಯದರ್ಶಿಗಳಾದ ಶಿವಾನಂದ ಮಿಕಲಿ, ಪ್ರಧಾನ ಕಾರ್ಯದರ್ಶಿಗಳಾದ ಎಫ್.ಜಿ.ನವಲಗುಂದ, ರಾಜ್ಯ ಸರಕಾರಿನೌಕರರ ಸಂಘದ ನಿರ್ದೇಶಕರಾದ ಸಂಗಮೇಶ ಖನ್ನಿನಾಯ್ಕರ, ಸಿ.ಆರ್.ಪಿಗಳಾದ ಎಂ.ಎಂ.ಮಡಿವಾಳರ, ಎಸ್.ವ್ಹಿ.ಜಗುನವರ, ಎ.ಕೆ.ಮುಳ್ಳೂರ, ಬಿ.ಐ.ಇ.ಆರ್.ಟಿ ವೈ.ಬಿ.ಕಡಕೋಳ, ವಿಜಯ ಮರಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಮ್ಯಾನೇಜರ್ ಐ.ಎಂ.ಮಕಾನದಾರ, ಮೇಲ್ವಿಚಾರಕರಾದ ಎಸ್.ಎಲ್.ಕಾಶಪ್ಪಗೋಳ, ಪ್ರಥಮ ದರ್ಜೆ ಸಹಾಯಕರಾದ ಎನ್.ಎಸ್.ವಗೆನ್ನವರ, ದ್ವಿತಿಯ ದರ್ಜೆ ಸಹಾಯಕರಾದ ಬಾಬಾಜಾನ ಮಾಳಗಿ,ವ್ಹಿ.ಎಚ್.ನೇಗಲಿ, ಪ್ರಶಾಂತ ಮೋಟೆಕರ,ಎಪ್.ಎಚ್.ಮಾವುತ,ಶಿಕ್ಷಣ ಸಂಯೋಜಕರಾದ ಎಂ.ಡಿ.ಹುದ್ದಾರ ಉಪಸ್ಥಿತರಿದ್ದರು.
ನಂತರ ಎಲ್ಲ ಶಿಕ್ಷಕ ಶಿಕ್ಷಕಿಯರು ತಮ್ಮ ತಮ್ಮ ಸೇವಾ ಪುಸ್ತಕಗಳನ್ನು ಪಡೆದುಕೊಂಡು ಅವುಗಳ ಪರಿಶೀಲನೆ ಮಾಡಿ ತಮ್ಮ ಸಂದೇಹಗಳನ್ನು ನಿವಾರಿಸಿಕೊಂಡರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಗುರುಮಾತೆಯರಾದ ಬಿ.ಐ.ಹಲಗಲಿ, ಕೆ.ಬಿ.ಚಂದರಗಿ ಪ್ರಾರ್ಥನಾ ಗೀತೆ ಹಾಡಿದರು.ಡಾ.ಬಿ.ಕೆ.ಪಡೆಪ್ಪನವರ ಸ್ವಾಗತಿಸಿದರು.
ಎಸ್.ಬಿ.ಪಾಣಿಶೆಟ್ಟಿ ನಿರೂಪಿಸಿದರು.ಮಲ್ಲಪ್ಪ ಯರಜರ್ವಿ ವಂದಿಸಿದರು.