- Advertisement -
ಬೆಳಗಾವಿ: ತಾಲೂಕಿನ ಖಾದರವಾಡಿ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಅತುಲ್ ಸುರೇಶ ಶಿರೊಳೆ ಅವರು ಅಂತಾರಾಷ್ಟ್ರೀಯ ಕುಸ್ತಿ ಪಟು ನವಂಬರ್ 1 ರಂದು ನಾಗಾಲ್ಯಾoಡಿಗೆ ತೆರಳಲಿದ್ದಾರೆ.
ನಾಗಾಲ್ಯಾಂಡ್ ನಲ್ಲಿ ರಾಷ್ಟ್ರೀಯ ಕುಸ್ತಿ ಚಾಂಪಿಯನಶಿಪ್ -2022 ರಲ್ಲಿ ಪಾಲ್ಗೊಳ್ಳಲು ಶಿರೊಳೆ ಅವರು ತೆರಳುತ್ತಿದ್ದು ಅವರಿಗೆ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿಗಳಾದ ಸುರೇಶ ಹಂಚಿನಾಳ, ಜೊತೆಗೆ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಅವರ ಕಾರ್ಯಾಲಯ ಸಿಬ್ಬಂದಿಗಳು ಅಭಿನಂದಿಸಿದ್ದಾರೆ