ಸಿಂದಗಿ: ಶಿಕ್ಷಕರಾಗುವವರಲ್ಲಿ ನಾಯಕತ್ವದ ಗುಣವಿರಬೇಕು. ಶಿಕ್ಷಣದ ಜೊತೆಗೆ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡಿ ಭವ್ಯ ಭಾರತದ ಉತ್ತಮ ಪ್ರಜೆಯಾಗುವಂತೆ ಪ್ರೇರೆಪಿಸಬೇಕು ಎಂದು ಗಣ್ಯ ವರ್ತಕ ನೆಹರು ಪೋರವಾಲ ಹೇಳಿದರು,
ಅವರು ಪಟ್ಟಣದ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿರುವ 2021-22 ನೇ ಸಾಲಿನ ವಿದ್ಯಾರ್ಥಿ ಸಂಘ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಇಂದು ಮೋಬೈಲ್ ಜಗತ್ತಿನಿಂದ ಸಮಾಜ ಹಾಳಾಗುತ್ತಿದೆ. ಹಾಳಾಗುತ್ತಿರುವ ಸಮಾಜವನ್ನು ಬದಲಿಸುವ ಶಕ್ತಿಯನ್ನು ಶಿಕ್ಷಕ ವರ್ಗ ಬೆಳೆಸಿಕೊಳ್ಳಬೇಕು. ಧನಾತ್ಮಕ ವಿಚಾರಗಳನ್ನು ಶಿಕ್ಷಕರು ರೂಪಿಸಿಕೊಂಡು ಉತ್ತಮ ಬದುಕನ್ನು ನಿರ್ಮಿಸಿಕೊಳ್ಳಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಸಾರಂಗಮಠದ ಡಾ.ಶ್ರೀ ಪ್ರಭುಸಾರಂಗದೇವ ಶಿವಾಚಾರ್ಯರರು ಮಾತನಾಡಿ,ಶಿಕ್ಷಕ ವರ್ಗದವರ ಮೇಲೆ ಹೆಚ್ಚು ಜವಾಬ್ದಾರಿ ಇದೆ. ಬದಲಾಗುತ್ತಿರುವ ವಿಜ್ಞಾನ ಹಾಗೂ ಸಮಾಜಕ್ಕೆ ನಾವೆಲ್ಲ ಹೊಂದಾಣಿಕೆಯಾಗಬೇಕು. ಬೋಧನೆಯಲ್ಲಿ ವೈಜ್ಞಾನಿಕ ಪದ್ದತಿಗೆ ಹೆಚ್ಚು ಅವಕಾಶವನ್ನು ನೀಡ ಬೇಕು ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಡಾ.ಬಿ.ಜಿ.ಮಠ ಮಾತನಾಡಿ, ಶಿಕ್ಷಕರು ಬೌದ್ದಿಕ ಮತ್ತು ಕಲಾತ್ಮಕ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಸಹಕಾರ, ಸಮಾನತೆ, ಸಹಬಾಳ್ವೆ, ಪಸರಿಸುವಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಮಗುವಿನ ಮೇಲೆ ಹೆಚ್ಚು ಪ್ರಭಾವ ಬಿರುತ್ತವೆ. ಶಿಕ್ಷಕರು ಉತ್ತಮ ಮನೋವಿಜ್ಞಾನವನ್ನು ಬಳಸಿಕೊಂಡು ಪಾಠ ಬೋಧನೆ ಮಾಡಬೇಕು ಎಂದು ತಿಳಿಸಿದರು.
ಸಮಾರಂಭದ ಪ್ರಾಚಾರ್ಯ ಡಾ.ಶರಣಬಸವ ಜೋಗೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆ ಮೇಲೆ ಸಂಘಟನಾ ಕಾರ್ಯದರ್ಶಿ ಡಾ.ಕವಿತಾ ರಾಠೋಡ, ಕಾರ್ಯದರ್ಶಿ ಸುನೀಲ ಬಜಂತ್ರಿ ಇದ್ದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಜೆ.ಸಿ.ನಂದಿಕೋಲ 2021-22 ನೇ ಸಾಲಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕ ಎಮ್.ಎಸ್.ಹೈಯಾಳಕರ, ಪಿ.ಎಂ.ಮಡಿವಾಳರ, ಎನ್.ಬಿ.ಪೂಜಾರಿ, ಚೆನ್ನಪ್ಪಕತ್ತಿ, ಶಿವಮಹಾಂತ ಪೂಜಾರಿ, ಮಹಾಂತೇಶ ನೂಲಾನವರ, ಸುಧಾಕರಚವ್ಹಾಣ, ದಾನಯ್ಯ ಮಠಪತಿ, ಪಿ.ಸಿ.ಕುಲಕರ್ಣಿ, ವಿದ್ಯಾ ಮೊಗಲಿ, ವಿಜಯಲಕ್ಷ್ಮೀ ಬಜಂತ್ರಿ, ಚನ್ನುಕತ್ತಿ, ಶಿವಕುಮಾರ ಕತ್ತಿ ಸೇರಿದಂತೆ ಅನೇಕರು ಇದ್ದರು.
ಪ್ರಶಿಕ್ಷಣಾರ್ಥಿ ಜಯಶ್ರೀ ದೇವನಗಲ ನಿರೂಪಿಸಿದರು, ಅರ್ಪಿತಾ ಕೋಟಿ ಪ್ರಾರ್ಥಿಸಿದರು, ದಿ.ಎಸ್.ಮಠಪತಿ ಸ್ವಾಗತಿಸಿದರು, ಸುನೀಲ ಬಜಂತ್ರಿ ವಂದಿಸಿದರು.