Homeಸುದ್ದಿಗಳುಡಿಎಸ್‍ಎಸ್ ರಾಜ್ಯ ಘಟಕಕ್ಕೆ ತೆಳಗಡೆ ಮತ್ತು ಬನ್ನಟ್ಟಿ ನೇಮಕ

ಡಿಎಸ್‍ಎಸ್ ರಾಜ್ಯ ಘಟಕಕ್ಕೆ ತೆಳಗಡೆ ಮತ್ತು ಬನ್ನಟ್ಟಿ ನೇಮಕ

ಮೂಡಲಗಿ: ದಲಿತ ಸಂಘರ್ಷ ಸಮಿತಿ- ಕರ್ನಾಟಕ ಸಂಘಟನೆಗೆ ರಾಜ್ಯ ಸಂಘಟನಾ ಸಂಚಾಲಕರಾಗಿ ಮೂಡಲಗಿ ತಾಲೂಕಿನ ಧರ್ಮಟ್ಟಿ ಗ್ರಾಮದ ಲಕ್ಕಪ್ಪ ಯಶವಂತ ತೆಳಗಡೆ ಮತ್ತು ಪಟಗುಂದಿ ಗ್ರಾಮದ ಬಾಳೇಶ ನಾಗಪ್ಪ ಬನ್ನಟ್ಟಿ ಅವರನ್ನು ಸಮಿತಿಯ ಮಂಜು ಅಣ್ಣಯ್ಯನವರ ಅಧ್ಯಕ್ಷತೆಯಲ್ಲಿ ಶನಿವಾರದಂದು   ಬೆಂಗಳೂರದಲ್ಲಿ ಜರುಗಿದ ಸಭೆಯಲ್ಲಿ ನೇಮಕ ಮಾಡಲಾಗಿದೆ ಎಂದು ಸಂಘಟನೆಯ ರಾಜ್ಯ ಸಂಘಟನಾ ಆಂತರಿಕ ಶಿಸ್ತು ವಿಭಾಗ ಸಂಚಾಲಕ ಬೆನ್ನಿಗಾನಹಳ್ಳಿ ರಾಮಚಂದ್ರ ಅವರು ಆದೇಶಿಸಿದ್ದಾರೆ.

ಸಭೆಯಲ್ಲಿ ಮಹಿಳಾ ಘಟಕದ ಬೆಳಗಾವಿ ವಿಭಾಗೀಯ  ಸಂಚಾಲಕರಾಗಿ ಕೊಣ್ಣುರದ ಗೀತಾ ಹ.ಸಣ್ಣಕ್ಕಿ, ಜಿಲ್ಲಾ ಅಲ್ಪಸಂಖ್ಯಾತ ವಿಭಾಗೀಯ ಸಂಚಾಲಕರಾಗಿ ಗೋಕಾಕದ ಅಲ್ಲಾಭಕ್ಷ ಅ.ಮುಲ್ಲಾ, ಜಿಲ್ಲಾ ಸಂಚಾಲಕರಾಗಿ ಘಟಪ್ರಭಾದ ಆನಂದ ಲ.ತಾಯವ್ವಗೋಳ, ಜಿಲ್ಲಾ ಸಂಘಟನಾ ಸಂಚಾಲಕರಾಗಿ ಮೂಡಲಗಿ ಸುರೇಶ ಸಣ್ಣಕ್ಕಿ ಅವರು ಆಯ್ಕೆಗೊಂಡಿದ್ದಾರೆ. 

ನೂತನ ಪದಾಧಿಕಾರಿಗಳು ಜಿಲ್ಲೆಯಲ್ಲಿ ಸಂಘಟನೆಯನ್ನು ಬಲಿಷ್ಠಗೊಳಿಸಬೇಕೆಂದು ಆದೇಶಿಸಿದ್ದಾರೆ.

RELATED ARTICLES

Most Popular

error: Content is protected !!
Join WhatsApp Group