ಬೀದರ – ಸಹೋದರಿಯರಿಬ್ಬ ಶವಗಳು ಬಾವಿಯಲ್ಲಿ ಪತ್ತೆಯಾಗಿರುವ ಪ್ರಕರಣ ಜಿಲ್ಲೆಯ ಭಾಲ್ಕಿ ತಾಲೂಕಿನ ಅಟರ್ಗಾ ಗ್ರಾಮದಲ್ಲಿ ಸಂಭವಿಸಿದ್ದು ಪೋಷಕರು ಹಾಗೂ ಗ್ರಾಮಸ್ಥರ ರಲ್ಲಿ ಅನುಮಾನ ಹಾಗೂ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಶ್ರದ್ಧಾ(10 ), ಅಂಕಿತಾ(15 ) ಇಬ್ಬರೂ ಮೃತ ಸಹೋದರಿಯರು. ಬಾವಿಗೆ ಬಿದ್ದು ಸಹೋದರಿಯರಿಬ್ಬರೂ ಸಾವನ್ನಪ್ಪಿದ್ದು ತಂದೆ ತಾಯಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆಯಿಂದ ಆಘಾತಕ್ಕೊಳಗಾಗಿರುವ ಇಡೀ ಗ್ರಾಮ ಮೌನಕ್ಕೆ ಜಾರಿದೆ.
ಸಹೋದರಿಯರನ್ನು ದುಷ್ಕರ್ಮಿಗಳು ಕೊಲೆಗೈದು ಬಾವಿ ಬಿಸಾಕಿರುವ ಶಂಕೆ ಒಂದು ಕಡೆಯಾದರೆ, ಇನ್ನೊಂದು ಕಡೆ ಬಾವಿಗೆ ಬಿದ್ದ ಒಬ್ಬಳನ್ನು ರಕ್ಷಿಸಲು ಇನ್ನೊಬ್ಬಳೂ ಬಾವಿ ಪಾಲಾಗಿರುವ ಶಂಕೆ ವ್ಯಕ್ತವಾಗುತ್ತಿದೆ. ಬಾಲಕಿಯರ ಪೋಷಕರು ಮೆಹಕರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ಒತ್ತಾಯಿಸಿದ್ದಾರೆ.
ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ ಕ್ಷೇತ್ರದ ಶಾಸಕ ಈಶ್ವರ ಖಂಡ್ರೆ, ಘಟನೆ ಬಗ್ಗೆ ಎಸ್ಪಿ ಕಿಶೋರ್ ಬಾಬು ಜೊತೆಗೆ ಮಾತನಾಡಿ ಕೂಲಂಕುಷ ತನಿಖೆ ನಡೆಸಲು ಒತ್ತಾಯಿಸಿದರು.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ