ಸವದತ್ತಿ: ಮಹಾಯೋಗಿ ವೇಮನರ ಜಯಂತಿಯನ್ನು ಇಂದು ಸವದತ್ತಿಯ ತಹಶೀಲ್ದಾರ ಕಚೇರಿಯಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಕೀಲರಾದ ಎಸ್.ಆರ್.ಪಾಟೀಲ ಮಾತನಾಡಿ, “ಮಹಾಯೋಗಿ ವೇಮನರು ಸರಳತೆಯಿಂದ ಬದುಕಿ ಸಂತ ಜೀವನಕ್ಕೆ ಮಾದರಿ ಎನಿಸಿದ್ದರು. ವೇಮನರಿಂದ ಉತ್ಕೃಷ್ಟ ಸಾಹಿತ್ಯ ರಚನೆ ಯಾಯಿತು.ವೇಮನರ ಸಾಹಿತ್ಯ ವು ಜನರ ಮನಸ್ಸಿಗೆ ಪರಿಪೋಷಣೆ ನೀಡುವುದಲ್ಲದೆ ಜೀವನದಲ್ಲಿ ಪ್ರತಿಕೂಲ ಪರಿಸ್ಥಿತಿ ಬಂದಾಗ ಸಾಂತ್ವನ ಹೇಳುತ್ತದೆ. “ಎಂದು ವೇಮನರ ಬದುಕಿನ ಆದರ್ಶಗಳನ್ನು ಕುರಿತು ತಿಳಿಸಿದರು.
ಈ ಸಂದರ್ಭದಲ್ಲಿ ಮಾನ್ಯ ತಹಶೀಲ್ದಾರರಾದ ಪ್ರಶಾಂತ.ಪಾಟೀಲ, ಗ್ರೇಡ್2 ವೃಂದದ ತಹಶಿಲ್ದಾರರಾದ ಎಮ್.ವಿ. ಗುಂಡಪ್ಪಗೋಳ, ಸಮಾಜದ ಹಿರಿಯರಾದ ಸಂಜು ಜಾಲಿಕೊಪ್ಪ, ಹೆಚ್.ಪಿ.ಗಣಿ, ಆರ್.ಎಫ್. ಮಾಡೊಳ್ಳಿ, ಎಸ್.ಹೆಚ್. ಹೊಸಮನಿ, ವೆಂಕಟೇಶ ವಂಟಗೋಡಿ, ಹೆಚ್.ಆರ್.ಪೆಟ್ಲೂರ ಹಾಗೂ ತಹಶೀಲ್ದಾರ್ ಕಚೇರಿಯ ಸಿಬ್ಬಂದಿ ಹಾಜರಿದ್ದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ವಕೀಲರಾದ ಸಂಜು ಜಾಲಿಕೊಪ್ಪ ಸ್ವಾಗತಿಸಿದರು ತಹಶೀಲ್ದಾರ್ ಪ್ರಶಾಂತ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀನಿವಾಸ. ಉದಗಟ್ಟಿ, ನಿರೂಪಿಸಿದರು. ಬಿ. ಎನ್. ಹೊಸೂರ ವಂದಿಸಿದರು.