ಬೀದರ – ಆಸ್ಪತೆಯಲ್ಲಿರುವ ರೋಗಿಗೆ ರಕ್ತ ಬೇಕಾದಾಗ ಅದು ಸಸ್ಯಾಹಾರಿಯ ರಕ್ತವೋ ಮಾಂಸಾಹಾರಿಯ ರಕ್ತವೋ ಗೊತ್ತಿರುವುದಿಲ್ಲ. ಒಂದು ಮಗುವಿನ ಡೆಲಿವರಿ ಮಾಡಿಕೊಳ್ಳವು ಆಯಾ ದಲಿತಳಾಗಿರುತ್ತಾಳೆ….ಹೀಗಿದ್ದಾಗ ನಾವೇಕೆ ಧರ್ಮ ಜಾತಿಯೆಂದು ಬಡಿದಾಡಬೇಕು ಎಂದು ಕಾಂಗ್ರೆಸ್ ಮುಖಂಡ ರಹೀಮ್ ಖಾನ್ ಪ್ರಶ್ನೆ ಮಾಡಿದರು.
ಬಾಬಾಸಾಹೇಬ ಅಂಬೇಡ್ಕರ್ ಅವರ ೧೩೧ ನೇ ಜಯಂತಿಯ ನಿಮಿತ್ತ ಸಮಾರಂಭದಲ್ಲಿ ಅವರು ಮಾತನಾಡಿದರು.
ರಕ್ತದಾನ ಮಾಡುವವರು ಶೆ.೯೦ ರಷ್ಟು ಮಾಂಸಾಹಾರಿಗಳಾಗಿರುತ್ತಾರೆ ಆದರೆ ಹೊರಗೆ ಬಂದಾಗ ಸಸ್ಯಾಹಾರ ಮಾಂಸಾಹಾರವೆಂದು ಬಡಿದಾಡುತ್ತಾರೆ.ದಲಿತ ನರ್ಸ್ ಒಬ್ಬಳ ಕೈಯಲ್ಲಿ ಮಗುವಿನ ಜನನ ಆಗುತ್ತದೆ ಆದರೆ ಈ ಬಿಜೆಪಿಯವರು ಜಾತಿ ಧರ್ಮದ ಬಗ್ಗೆ ಮಾತನಾಡುತ್ತಾರೆ ಎಂದು ಅವರು ವಾಗ್ದಾಳಿ ನಡೆಸಿದರು.
ವರದಿ: ನಂದಕುಮಾರ ಕರಂಜೆ,ಬೀದರ