Homeಸುದ್ದಿಗಳುಕೋವಿಡ್ ನಲ್ಲಿ ಪತ್ರಕರ್ತರ ಕಾರ್ಯ ಮಹತ್ವದ್ದು - ಗೋಪಾಲ ಜಾಗನೂರಿ

ಕೋವಿಡ್ ನಲ್ಲಿ ಪತ್ರಕರ್ತರ ಕಾರ್ಯ ಮಹತ್ವದ್ದು – ಗೋಪಾಲ ಜಾಗನೂರಿ

ಮೂಡಲಗಿ – ಕೊರೋನಾ ವೈರಾಣು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅದರಿಂದ ರಕ್ಷಿಸಿಕೊಳ್ಳಲು ಪ್ರತಿಯೊಬ್ಬರೂ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಹಾಗೂ ಸಾಮಾಜಿಕ ಅಂತರ ಕಾಪಾಡಬೇಕು ಎಂದು ಗ್ರಾಮೀಣ ಕೂಟ ಕಿರು ಹಣಕಾಸು ಸಂಸ್ಥೆಯ ಮೂಡಲಗಿ ಬ್ರ್ಯಾಂಚ್ ಮ್ಯಾನೇಜರ್ ಗೋಪಾಲ ಸಿ. ಜಾಗನೂರಿ ಹೇಳಿದರು.

ಮೂಡಲಗಿ ತಾಲೂಕಿನ ಪತ್ರಕರ್ತರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಿ ಅವರು ಮಾತನಾಡಿದರು.

ಕೊರೋನಾ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಪತ್ರಕರ್ತರ ಕಾರ್ಯ ತುಂಬಾ ಮಹತ್ವದ್ದು. ಅವರು ಕೊರೋನಾ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ ಅವರ ಕೆಲಸ ಹೀಗೆಯೇ ಸಾಗುತ್ತಿರಬೇಕು ಎಂದು ಗೋಪಾಲ ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮೀಣ ಕೂಟದ ಇನ್ನೋರ್ವ ಸಿಬ್ಬಂದಿ ಮಲ್ಲಿಕಾರ್ಜುನ ಮಠಪತಿ ಇದ್ದರು.

RELATED ARTICLES

Most Popular

error: Content is protected !!
Join WhatsApp Group