spot_img
spot_img

ಸಿಂಧುತ್ವ ಪ್ರಮಾಣಪತ್ರ ಸಿಗದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಸಿಬ್ಬಂದಿ ನೇಣಿಗೆ ಶರಣು

Must Read

spot_img
- Advertisement -

ಬೀದರ – ಬೀದರ್ ಜಿಲ್ಲೆಯಲ್ಲಿ ಸಿಂಧುತ್ವ ಪ್ರಮಾಣಪತ್ರ ಬಾರದ್ದರಿಂದ ಬೇಸತ್ತ ಜಿಲ್ಲೆಯ ಹುಮನಾಬಾದ ತಾಲ್ಲೂಕಿನ ಕುಮಾರಚಿಂಚೋಳಿ ಗ್ರಾಮದ ಓಂಕಾರ ರೇವಣಪ್ಪ ಶೇರಿಕಾರ (35) ಭಾನುವಾರ ನಸುಕಿನ ಜಾವ ತಮ್ಮ ಹೊಲದಲ್ಲಿ ಗಿಡಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮೃತನಿಗೆ 4 ಜನ ಹೆಣ್ಣು ಮಕ್ಕಳಿದ್ದು, ನೌಕರಿ ಖಾಯಂ ಆಗುವ ಭರವಸೆ ಮೇಲೆ ಬಾಕಿ ಮಾಡಿಕೊಂಡಿದ್ದ ಓಂಕಾರ ಶೇರಿಕಾರ, ಈಗಾಗಲೇ ಇಬ್ಬರ ಮಕ್ಕಳ ಮದುವೆ ಮಾಡಿದ್ದು ರಾಜ್ಯ ಸರ್ಕಾರದಿಂದ ಗೊಂಡ ಎಸ್.ಟಿ.ಪ್ರಮಾಣಪತ್ರ ಆಧಾರದ ಮೇಲೆ ನೇಮಕಗೊಂಡಿದ್ದನೆನ್ನಲಾಗಿದೆ.

- Advertisement -

ಪ್ರಮಾಣಪತ್ರ ಪರಿಶೀಲನೆಗಾಗಿ ಕಲ್ಬುರ್ಗಿಗೆ ಕಳಿಸಲಾಗಿದೆ. ವ್ಯಕ್ತಿ ಸಾವಿಗೆ ರಾಜ್ಯ ಸರ್ಕಾರ ಸಿಂಧುತ್ವ ಕಲ್ಪಿಸದ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡ ಇದ್ದಾನೆ ಎಂದು ಗೊಂಡ ಸಮಾಜದ ಮುಖಂಡರು ನೇರವಾಗಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಘಟನೆಗೆ ನೇರವಾಗಿ ರಾಜ್ಯ ಸರ್ಕಾರದ ಧೋರಣೆಯೇ ಕಾರಣ ಎಂದು ಎಸ್.ಟಿ.ಗೊಂಡ ಮುಖಂಡರು ನ್ಯಾಯವಾದಿ ಸತೀಶ ರಾಂಪೂರೆ ಆಕ್ರೋಶ ವ್ಯಕ್ತಪಡಿಸಿದರು.


ವರದಿ: ನಂದಕುಮಾರ ಕರಂಜೆ,
ಟೈಮ್ಸ್ ಆಫ್ ಕರ್ನಾಟಕ, ಬೀದರ

- Advertisement -
- Advertisement -

Latest News

ಬಸವ ಜಯಂತಿ ಆಚರಣೆಗೆ ಹರ್ಡೇಕರ್ ಮಂಜಪ್ಪನವರೆ ಮೂಲ ಕಾರಣಕರ್ತರು – ಪ್ರೊ. ಶ್ರೀಕಾಂತ್ ಶಾನವಾಡ.

ಬೆಳಗಾವಿ - ಇದೇ ಫೆ. ೨೩  ರಂದು ಬೆಳಗಾವಿಯ ಮಹಾಂತೇಶ ನಗರದ ಹಳಕಟ್ಟಿ ಭವನದಲ್ಲಿ ವಚನ ಪ್ರಾರ್ಥನೆ ಮತ್ತು ಉಪನ್ಯಾಸ ಕಾರ್ಯಕ್ರಮ ನೆರವೇರಿತು. ಹರ್ಡೇಕರ್ ಮಂಜಪ್ಪನವರ ಬದುಕು...
- Advertisement -

More Articles Like This

- Advertisement -
close
error: Content is protected !!
Join WhatsApp Group