ಸಿಂದಗಿ: ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಎಂಎಲ್ಎಗಳು ಇರಲಿಲ್ಲ. ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತೀವ್ರ ಪೈಪೋಟಿಯಲ್ಲಿವೆ. ದಿ.ಎಂ.ಸಿ.ಮನಗೂಳಿಯವರು ವೈಯಕ್ತಿಕ ವರ್ಚಿಸ್ಸಿನ ಮೇಲೆ ಹಾಗೂ ಅವರು ನೀಡಿದ ಸಂಪೂರ್ಣ ನೀರಾವರಿ ಕೊಡುಗೆಗಳ ಮೇಲೆ ಗೆದ್ದಿದಾರೆ ವಿನಃ ಜೆಡಿಎಸ್ ಪಕ್ಷದ ವರ್ಚಸ್ಸಿನಿಂದಲ್ಲ ಎಂದು ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಎಚ್ಡಿಕೆಗೆ ತಿರುಗೇಟು ನೀಡಿದರು.
ಪಟ್ಟಣದ ಕೆಪಿಸಿಸಿ ಉಪಚುನಾವಣೆ ವಕ್ತಾರ ರಾಜಶೇಖರ ಅವರ ಮನೆಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಳೆದ 2013ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಣಾಳಿಕೆಯಲ್ಲಿ ನೀಡಿದ 165 ಭರವಸೆಗಳನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಆಡಳಿತ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಈಡೇರಿಸಿದ್ದಾರೆ ಆದರೆ ನಂತರದಲ್ಲಿ ಬಂದ ಸರಕಾರಗಳು ಒಂದೊಂದಾಗಿ ನಿಲ್ಲಿಸುವ ಹುನ್ನಾರದಲ್ಲಿ ತೊಡಗಿ ಬಿಜೆಪಿ ನಾಯಕರು ದಿಕ್ಕು ದಿಸೆಯಿಲ್ಲದ ಹೇಳಿಕೆ ನೀಡುತ್ತಿದ್ದಾರೆ. ನಾನು ಆರೋಗ್ಯ ಇಲಾಖೆ, ಲೋಕೋಪಯೋಗಿ ಸಚಿವರಿದ್ದ ಸಂದರ್ಭದಲ್ಲಿ ಇದೇ ಭೂಸನೂರ ಅವರಿಗೆ ಪಕ್ಷ ನೋಡದೇ ಎಲ್ಲ ಯೋಜನೆಗಳಿಗೆ ಅನುದಾನ ಒದಗಿಸಿಕೊಟ್ಟಿದ್ದೇನೆ ಅದು ಕಾಂಗ್ರೆಸಿನ ಶಕ್ತಿ. ಈ ಪಕ್ಷದಲ್ಲಿ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವ ರೀತಿಯಲ್ಲಿ ಅಧಿಕಾರ ನಡೆಸಿದ್ದೇವೆ ಆದರೆ ಬಿಜೆಪಿ ಸರಕಾರ ಅಭಿವೃದ್ಧಿಗೆ ಕಂಟಕಪ್ರಾಯವಾಗಿರುವಂತವರು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪರಕೀಯರ ದಾಸ್ಯದಿಂದ ದೇಶವನ್ನು ಬಿಡಿಸುವ ಸಲುವಾಗಿ ತಮ್ಮ ಪ್ರಾಣವನ್ನೆ ತ್ಯಾಗ ಮಾಡಿ ಇತಿಹಾಸ ಸೃಷ್ಟಿಸಿದ ಕಾಂಗ್ರೆಸ್ ಪಕ್ಷ. ಮೂಲಭೂತ ಹಕ್ಕುಗಳು, ಕೋಮು ಸೌಹಾರ್ದ, ಅಸ್ಪೃಶ್ಯತೆ ನಿವಾರಣೆ, ಸ್ವತಂತ್ರವಾದ ಉದ್ದೇಶಗಳು ಸಂವಿಧಾನದ ಆಶಯಗಳು. ನ್ಯಾಯ, ಸಮಾನತೆ ಸಮನ್ವಯತೆ, ನಮಗೆ ನಾವೇ ನ್ಯಾಯ ಕೊಡಬೇಕು. ಪ್ರಧಾನಿ, ರಾಜ್ಯಪಾಲ, ರಾಷ್ಟ್ರಪತಿ, ಮುಖ್ಯಮಂತ್ರಿ ಸಂವಿಧಾನಬದ್ಧವಾಗಿ ರಚನೆಯಾದ ಸಂಸ್ಥೆಗಳನ್ನು ರಾಜಕೀಯ ಮಣಿಸಲಿಕ್ಕೆ ಬಳಸಿದರೆ ಸಂವಿಧಾನಕ್ಕೆ ಅಪಚಾರವೆಸಗುತ್ತಿದೆ. ಇದರಿಂದ ಭಾರತ ದೇಶದ ಪ್ರಜಾಪ್ರಭುತ್ವ ಕೋಮುವಾದ ಸರ್ವಾಧಿಕಾರಿ ಧೋರಣೆ ಕಡೆಗೆ ವಾಲುತ್ತಿದೆ. ಅಲ್ಲದೆ ಸಂವಿಧಾನದ ಪರಾಮರ್ಶೆ ಮಾಡುವ ಅಧಿಕಾರ ಯಾವುದೇ ಸರಕಾರಕ್ಕಿಲ್ಲ ಆದರೆ ಇಂದಿನ ಕೇಂದ್ರದ ಬಿಜೆಪಿ ಸರಕಾರ ಏಕಪಕ್ಷೀಯವಾಗಿ ಮಂಡನೆಗಳನ್ನು ಪಾಸು ಮಾಡುತ್ತಿದೆ. ಸರಕಾರ ಒಂದು ಮಗು ಇದ್ದ ಹಾಗೆ ಮತಕ್ಷೇತ್ರ ತಾಯಿ ಇದಂತೆ ಅದನ್ನು ಮರೆಮಾಚುವಂತ ಕೆಲಸ ಬಿಜೆಪಿಯಲ್ಲಿ ನಡೆಯುತ್ತಿದೆ. ಧರ್ಮ ಸಂಸತ್ ಮೇಲೆ ಪ್ರಭುತ್ವವನ್ನು ನಿಯಂತ್ರಣ ಮಾಡಬಾರದು. ಬಹು ಸಂಸ್ಕೃತಿಯನ್ನು ಗೌರವಿಸುತ್ತಿರುವುದು ಮಾನವನನ್ನು ಉಲ್ಲಂಘಿಸಿದಂತಾಗಿದೆ. ಕಾರಣ ಸಮಸ್ಯೆಗಳ ಬೀಗದ ಕೈ ಇರುವದು ರಾಜಕೀಯ ಅಧಿಕಾರದಲ್ಲಿ ಮತದಾರರು ಯೋಗ್ಯರ, ವಿವೇಚನರ, ಸಮರ್ಥರ ಕೈಯಲ್ಲಿ ಬೀಗದ ಕೈ ಕೊಡಬೇಕು ಅದಕ್ಕೆ ನಾವೆಲ್ಲ ದಲಿತರು ಒಕ್ಕಟ್ಟಾಗಿ ನಿಂತು ಕೋಮುವಾದಿ ಸರಕಾರಗಳನ್ನು ಕಿತ್ತೊಗೆಯಲು ಸನ್ನದ್ಧರಾಗಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ವಕ್ತಾರ ರಾಜಶೇಖರ ಕೂಚಬಾಳ, ಕಾಂಗ್ರೆಸ್ ಸಮಿತಿ ಮಹಿಳಾ ಜಿಲ್ಲಾಧ್ಯಕ್ಷೆ ವಿದ್ಯಾರಾಣಿ ತುಂಗಳ, ಎಸ್ಸಿ ಘಟಕದ ಜಿಲ್ಲಾಧ್ಯಕ್ಷೆ ಭಾರತಿ ಹೊಸಮನಿ, ತಾಲೂಕಾದ್ಯಕ್ಷ ಪರಶುರಾಮ ಕಾಂಬಳೆ, ದಸಂಸ ಜಿಲ್ಲಾ ಸಂ ಸಂಚಾಲಕ ವೈ.ಸಿ.ಮಯೂರ, ದಸಂಸ ಜಿಲ್ಲಾ ಸಂಚಾಲಕ ಚಂದ್ರಕಾಂತ ಸಿಂಗೆ, ತಾಲೂಕು ಸಂಚಾಲಕ ಮಂಜುನಾಥ ಯಂಟಮಾನ ಸೇರಿದಂತೆ ಅನೇಕರಿದ್ದರು.