ಮೂಡಲಗಿ: ಮೂಡಲಗಿ ತಾಲೂಕಿನ ವಡೇರಹಟ್ಟಿ ಗ್ರಾಮದ ಕಿಶನ ನಂದಿ ಅವರು ಬೆಂಗಳೂರಿನಲ್ಲಿ ನಡೆದ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕರ ಗಜಪಡೆಯ ಸಭೆಯಲ್ಲಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ರಾಜ್ಯ ಕಾರ್ಯದರ್ಶಿಯಾಗಿ ಸೋಮನಾಥ ಹೊಸಟ್ಟಿ, ಉಪಾಧ್ಯಕ್ಷ ಶ್ರೀನಿವಾಸ ನಾಯಕ(ಬೆಂಗಳೂರು ಗ್ರಾಮಾಂತರ), ತಿಮ್ಮಯ್ಯ ನಾಯಕ (ಚಿಕ್ಕಬಳ್ಳಾಪುರ), ಪ್ರಧಾನ ಕಾರ್ಯದರ್ಶಿಗಳಾಗಿ ಪ್ರಕಾಶ ಮೆಣಸಿನಕಾಯಿ (ಧಾರವಾಡ ), ನಾಗರಾಜ ನಾಯಕ (ಕೋಲಾರ), ಖಜಾಂಚಿಯಾಗಿ ಜ್ಞಾನೇಶ್ ನಾಯಕ (ಬೆಂಗಳೂರು ನಗರ), ಮಹಿಳಾ ಘಟಕಕ್ಕೆ ಕಂಚಮ್ಮ ನಾಯಕ (ತುಮಕೂರು) ಅವರು ಆಯ್ಕೆಯಾಗಿದ್ದಾರೆ.
ರಾಜ್ಯಾಧ್ಯಕ್ಷ ಕಿಶನ ನಂದಿ ಅವರು ಮಾತನಾಡಿ, ನನ್ನ ಮೇಲಿನ ವಿಶ್ವಾಸದಿಂದ ರಾಜ್ಯಾಧ್ಯಕ್ಷ ಮಾಡಿರುವುದಕ್ಕೆ ಗಜಪಡೆ ಸದಸ್ಯರಿಗೆ ಹಾಗೂ ಸಮಸ್ತ ವಾಲ್ಮೀಕಿ ನಾಯಕ ಸಮುದಾಯದವರಿಗೆ ಚಿರಋಣಿಯಾಗಿದ್ದೇನೆ ಎಂದರು.