Homeಸುದ್ದಿಗಳುನಾನೇನು ಮಜಾ ಮಾಡಲು ಹೋಗಿದ್ದೀನಾ - ಪ್ರಭು ಚವ್ಹಾಣ ಕಿಡಿ

ನಾನೇನು ಮಜಾ ಮಾಡಲು ಹೋಗಿದ್ದೀನಾ – ಪ್ರಭು ಚವ್ಹಾಣ ಕಿಡಿ

ಬೀದರ: ಕ್ಷೇತ್ರದ ಜನರಿಗೆ ಭೇಟಿಯಾಗಲು ಟೈಂ ಕೊಡಿ ಎಂದಿದ್ದಕ್ಕೆ ನಾನೇನು ಮಜಾ ಮಾಡಲು ಹೋಗಿದ್ದೀನಾ ಎಂದು ಜನರ ಮೇಲೆ ಸಚಿವ ಪ್ರಭು ಚವ್ಹಾಣ ರೇಗಾಡಿದ ಪ್ರಸಂಗ ನಡೆಯಿತು.

ತಾಲೂಕಿನ ಔರಾದ ಪಟ್ಟಣಕ್ಕೆ ಪಶು ಸಂಗೋಪನಾ ಸಚಿವ ಚವ್ಹಾಣ ಅವರು ಆಗಮಿಸಿದಾಗ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತ ರು ತಮ್ಮ ಬೇಡಿಕೆಯ ಪತ್ರವನ್ನು ಸಲ್ಲಿಸಲು ಹೋದಾಗ ಸಚಿವರು ಸಿಡಿಮಿಡಿಗೊಂಡರು.

ತಾವು ಕರವೇ ಕಾರ್ಯಕರ್ತರು ತಮ್ಮ ಭೇಟಿಗೆ ಬಂದಿದ್ದು ಕ್ಷೇತ್ರದಲ್ಲಿ ನೀವು ಸಿಗುತ್ತಾ ಇಲ್ಲ ಭೇಟಿಯಾಗಲು ಟೈಂ ಕೊಡಿ ಎಂದು ಕಾರ್ಯಕರ್ತರು ಬೇಡಿಕೊಂಡಾಗ ನಾನೇನು ಮೋಜಿ ಮಸ್ತಿ ಮಾಡಲು ಹೋಗಿಲ್ಲ ಈಗ ತಾನೆ ಬೇರೆ ಊರಿಂದ ಬರ್ತಾ ಇದ್ದೇನೆ ಎಂದು ಪ್ರಭು ಅವರು ರೇಗಾಡಿದರು.

ನಂತರ ಕರವೇ ಕಾರ್ಯಕರ್ತರು ಸಚಿವರ ಆಪ್ತ ಸಹಾಯಕ ಜೈಪಾಲ್ ರಾಠೋಡ ತಮಗೆ ಬೆದರಿಕೆ ಹಾಕಿದ್ದಾರೆಂದು ಪೊಲೀಸ್ ದೂರು ಕೊಟ್ಟರು.


ವರದಿ: ನಂದಕುಮಾರ ಕರಂಜೆ, ಬೀದರ

RELATED ARTICLES

Most Popular

error: Content is protected !!
Join WhatsApp Group