ಮೈಸೂರಿನ ಜಯನಗರದಲ್ಲಿರುವ ನಗರ ಪಾಲಿಕೆ ವಲಯ -೨ ರ ವರ್ಕಇನ್ಸ್ಸ್ಪೆಕ್ಟರ್ ಶಿವಸ್ವಾಮಿ ರವರು ೪೨ ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಪಾಲಿಕೆ ಸಿಬ್ಬಂದಿ ಹಾಗೂ ಸ್ನೇಹ ಬಳಗದ ವತಿಯಿಂದ ಅಭಿನಂದನಾ ಸಮಾರಂಭವನ್ನು ಕಛೇರಿಯ ಆವರಣದಲ್ಲಿ ನೆರವೇರಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೈಸೂರು ಮಹಾನಗರ ಪಾಲಿಕೆಯ ಮಾಜಿ ಮಹಾಪೌರರಾದ ಪುರುಷೋತ್ತಮ ರವರು ನಿವೃತ್ತಿ ಹೊಂದಿದ ಶಿವಸ್ವಾಮಿ ದಂಪತಿಗಳನ್ನು ಅಭಿನಂದಿಸಿ ಮಾತನಾಡಿದರು.
ಪಾಲಿಕೆಯಲ್ಲಿ ೪೨ ವರ್ಷಗಳ ಕಾಲ ಸುದಿರ್ಘವಾಗಿ ಸೇವೆ ಸಲ್ಲಿಸಿ ಜನ ಮನ್ನಣೆಗೆ ಪಾತ್ರರಾಗಿದ್ದರು. ಅವರ ಸೇವಾ ಮನೋಭಾವದ ಕೆಲಸ ಆತ್ಮತೃಪ್ತಿಯ ಜೊತೆಗೆ ಇಂತಹ ಅಭಿನಂದನಾ ಸಮಾರಂಭವನ್ನು ನಿವೃತ್ತಿ ಹೊಂದಿದ ದಿನವೇ ಏರ್ಪಡಿಸಿರುವುದು ಅವರ ಕರ್ತವ್ಯಕ್ಕೆ ಹಾಗೂ ಆತ್ಮಸಾಕ್ಷಿಗೆ ಸಂದ ಗೌರವ ಎಂದು ಸಂತೋಷ ವ್ಯಕ್ತಪಡಿಸಿದರು.
ವೃತ್ತಿಯ ಬದುಕಿನಲ್ಲಿ ಅನೇಕ ತೊಡಕುಗಳು ಸಾಮಾನ್ಯವಾಗಿ ಪ್ರತಿನಿತ್ಯವೂ ಕಾಣುತ್ತೇವೆ. ಅದನ್ನು ದೈರ್ಯದಿಂದ, ಎದೆಗುಂದದೆ ಸಮರ್ಥವಾಗಿ ನಿಭಾಯಿಸಿದರೆ ಜನರ ಕಷ್ಟ ಕಾರ್ಪಣ್ಯಗಳನ್ನು, ಸಮಸ್ಯೆಗಳನ್ನು ತಕ್ಷಣ ಬಗೆಹರಿಸಲು ಸಾಧ್ಯವಾಗುತ್ತದೆ. ಮಹಾಮಾನವತವಾದಿ ಡಾ.ಬಿ.ಆರ್.ಅಂಬೇಡ್ಕರ್ ರವರ ತತ್ವಸಿದ್ಧಾಂತಗಳನ್ನು ಇಂದಿನ ಯುವಕರು ಅರಿತುಕೊಳ್ಳಬೇಕು ಜೊತೆಗೆ ಮೌಢ್ಯವನ್ನು ತೊಡೆದು ಹಾಕಿ, ಶಿಕ್ಷಣವನ್ನು ಕಲಿತಾಗ ಬದುಕಿನಲ್ಲಿ ಎಲ್ಲವೂ ಸಾಧ್ಯವಾಗುವತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ನಗರ ಪಾಲಿಕೆಯ ವರ್ಕ್ಇನ್ಸ್ಸ್ಪೆಕ್ಟರ್ ಶಿವಸ್ವಾಮಿ ರವರು ನಗರ ಪಾಲಿಕೆಯಲ್ಲಿ ೪೨ ವರ್ಷಗಳ ಕಾಲ ಸೇವೆ ಸಲ್ಲಿಸಿದ ಆತ್ಮತೃಪ್ತಿ ನನಗಿದೆ. ಸಾರ್ವಜನಿಕರ ಹಣವನ್ನು ನಗರ ಪಾಲಿಕೆ ಋಣವನ್ನು ಪ್ರಾಮಾಣಿಕತೆಯಿಂದ ಶಿಸ್ತುಬದ್ಧವಾಗಿ ಕಾರ್ಯನಿರ್ವಹಿಸಿದ್ದೇನೆಂದು ಅಭಿಪ್ರಾಯಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ನಗರ ಪಾಲಿಕೆ ವಲಯ-೨ ಉಪ ಆಯುಕ್ತರಾದ ನಾಗರಾಜು ರವರು ಮಾತನಾಡಿ ಸರ್ಕಾರಿ ಕೆಲಸಕ್ಕೆ ಸೇರಿದವರಿಗೆ ನಿವೃತ್ತಿ ಸರ್ವೆ ಸಾಮಾನ್ಯ ಸಂಗತಿ. ನಿವೃತ್ತಿಯ ನಂತರವೂ ಶಿವಸ್ವಾಮಿರವರು ಸಮರ್ಥವಾಗಿರುವುದರಿಂದ ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ಮುಂದಾಗಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆದಿಕರ್ನಾಟಕ ಮಹಾಸಂಸ್ಥೆಯ ಅಧ್ಯಕ್ಷರಾದ ಸಿದ್ದರಾಜು.ಪಿ (ಸುನಿಲ್), ಮಾಜಿ ಮಹಾಪೌರರಾದ ಬಿ.ಎಲ್.ಭೈರಪ್ಪ, ಮಾಜಿ ಉಪ ಮಹಾಪೌರರಾದ ಸಿದ್ದರಾಜು, ನಗರ ಪಾಲಿಕೆ ಮಾಜಿ ಸದಸ್ಯರಾದ ಎಂ.ಸಿ.ರಮೇಶ್, ದಲಿತ ಮುಖಂಡರಾದ ವಿ.ರಾಮಸ್ವಾಮಿ, ಅಶೋಕಪುರಂ ದೊಡ್ಡಗರಡಿ ಸಂಘದ ಅಧ್ಯಕ್ಷರಾದ ಆರ್.ಸಿ.ಮಹೇಶ್, ಚಿಕ್ಕಗರಡಿ ಸಂಘದ ಅಧ್ಯಕ್ಷರಾದ ನಾಗರಾಜು (ಬಿಲ್ಲಯ್ಯ), ಲೇಖಕರಾದ ಸಿದ್ದಸ್ವಾಮಿ, ಮುಖಂಡರಾದ ಜಯಕುಮಾರ್, ರಾಜ್ಮೊಗ, ಕೃಷ್ಣಮೂರ್ತಿ, ಮಂಜುನಾಥ್, ಪೈಲ್ವಾನ್ ಕೃಷ್ಣ, ಜೆ.ರವಿ, ನಗರಪಾಲಿಕೆ ಸಿಬ್ಬಂದಿ ಹಾಗೂ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ನಿವೃತ್ತಿ ಹೊಂದಿದ ವರ್ಕಇನ್ಸ್ಸ್ಪೆಕ್ಟರ್ ಶಿವಸ್ವಾಮಿ ಹಾಗೂ ಪತ್ನಿ ಶಿವಮ್ಮ ಶಿವಸ್ವಾಮಿ ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಿವಸ್ವಾಮಿ ರವರ ತಾಯಿ ಜವರಮ್ಮ, ಮಕ್ಕಳಾದ ಪೈಲ್ವಾನ್ ಅವಿನಾಶ್, ಯುವ ಉದ್ಯಮಿ ಚಂದ್ರಶೇಖರ್, ಸೋದರಿಯರಾದ ಗಾಯಿತ್ರಿ, ಹೇಮಾವತಿ, ಪುಷ್ಪ, ಸಹೋದರರಾದ ಬಾಲರಾಜ್, ನಾಗರಾಜ್, ಪರಮೇಶ್ ರವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಪದವಿಧರ ಸಂಘದ ಅಧ್ಯಕ್ಷರಾದ ರವಿಕುಮಾರ್.ಜೆ ನೆರವೇರಿಸಿಕೊಟ್ಟರು ನಂತರ ಕಲಾವಿದರಾದ ಮರಿಸ್ವಾಮಿ(ಹಂಸ) ರವರಿಂದ ಅಂಬೇಡ್ಕರ್ ರವರ ಕ್ರಾಂತಿಗೀತೆಗಳನ್ನು ಏರ್ಪಡಿಸಲಾಗಿತ್ತು.