ಕವನ: ಅನ್ನದಾತ ಅಯ್ಯೋ ಪಾಪ!

Must Read

ಹೊಲವ ಉಳುವ ರೈತ ಪಾಪ

ಹಲುಬುವಂತೆ ಆಗಿದೆ !!
ತನ್ನ ಕುಣಿಯ ತಾನೇ ತೋಡಿ
ಕೂರೋ ಹಾಗೆ ಮಾಡಿದೆ!!

ಎಲ್ಲ ಜನರ ಹೊಟ್ಟೆ ತುಂಬ್ಸೋ
ಅನ್ನದಾತ ಪ್ರಭು ಇಂವ
ಇವನ ಮನೆಯೆ ಹೊಟ್ಟೆ-ಬಟ್ಟೆ
ಕೊರತೆಯಿಂದ ಕೊರಗಿದೆ!!

ಮಂಜೇ ಇರಲಿ,ಮಳೆಯೆ ಬರಲಿ
ಸಂಜೆವರೆಗೂ ದುಡಿಯುವ
ಗುಟುಕು ಗಂಜಿಗಾಗಿ ಅಂಜಿ
ಜೀವಮಾನ ಸವೆಸುವ!!

ಬಿಸಿಲ ಧಗೆಯ ಬೆವರ ಜಳಕ
ಶ್ರಮಕೆ ಇಲ್ಲ ಸಾರ್ಥಕ
ಶ್ರಮವ ಪಡದೆ ಬೇರೆ ಜನರು
ಮೆರೆಯುತಿಹರು ಸ್ವಾರ್ಥವ!!

ದೇಶದ ಬೆನ್ನೆಲುಬು ಎಂದು
ನುಡಿಯುತಿಹರೆ ಸುಮ್ಮನೆ
ಹೊಗಳಿಕೆಯ ಭಾಷಣವ ಬಿಗಿದು
ಕಟ್ಟಿ ಮಾತಿನರಮನೆ!!

ಹಿಡಿದು ಎತ್ತುವ ಕೈಗಳಿರದೆ
ಕಂಗಾಲಾಗಿ ಕುಳಿತಿದೆ!!
ಮುಗುದ ಮನದ ಶ್ರಮಜೀವಿ
ದಿನವು ಜೀವ ಕೊಡುತಿವೆ!!

✍️ ಕಮಲಾಕ್ಷಿ ಕೌಜಲಗಿ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group