ಕವನ: ಒಪ್ಪಿಕೊ ಕೃಷ್ಣ

Must Read

ಒಪ್ಪಿಕೊ ಕೃಷ್ಣ

ಮನೆ ಅಂಗಳದಿ
ಹೆಜ್ಜೆಗಳ ಹಾಕಿ
ಹೃದಯ ಮಂಟಪದಿ
ಬಾ ಎನ್ನುತ
ಸುದಾಮನ ಬೆಲ್ಲ ಅವಲಕ್ಕಿ
ತರತರದ ಉಂಡಿಗಳ
ಮೊಸರು ಕಡೆದು ತೆಗೆದ ಬೆಣ್ಣೆಯ
ಆಕಳ ನೊರೆ ಹಾಲು
ಮಾನಸ ಪೂಜೆಯ ಮಾಡಿ
ಅಪಿ೯ಸುತಿಹೆನು
ಒಪ್ಪಿಕೋ ಕೃಷ್ಣ

ಚಿನ್ನದ ತೊಟ್ಟಿಲ ಕಟ್ಟಿ
ನಿನ್ನ ಮಲಗಿಸಿ ಹಾಡಿ
ತೂಗುವೆನು
ಯಶೋದೆಯಾಗಿ
ಎನ್ನ ಹೃದಯ ಸಿಂಹಾಸನದಿ
ವಿರಾಜಮಾನ
ಆಗು ಬಾ ಕೃಷ್ಣ.

ರಾಧಾ ಶಾಮರಾವ

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group