ಕವನ: ಕನಕ ಕೃಷ್ಣರ ಒಗೆತನ

Must Read

ಕನಕ ಕೃಷ್ಣರ ಒಗೆತನ

ಕೃಷ್ಣ ಗೊಲ್ಲ ಕನಕ ಕುರುಬ

ಗೋವುಗಳಿಗೆ ಕೃಷ್ಣನ ಕೊಳಲೆಂದರೆ ಜೀವ
ಕುರಿಗಳಿಗೆ ಕನಕನ ಹಾಡುಗಳೆಂದರೆ ಪ್ರಾಣ
ಒಗೆತನಕೆ ಭೇದವಿಲ್ಲ ಭಕ್ತಿಗೆ ಕುಂದಿಲ್ಲ

ಕನಕ ಕೋಣಮಂತ್ರ ಜಪಿಸಿ
ಹೆಬ್ಬಂಡೆ ಸರಿಸಿ ವ್ಯಾಸರಾಯರ ಪ್ರೀತಿಪಾತ್ರನಾದ
ಕೃಷ್ಣ ಗುರುಗಳ
ಕಳೆದು ಹೋದ ಸಂತಾನವ ಮರಳಿಸಿ ಸಾಂದಿಪನಿ ಗುರುಗಳ ಪ್ರಿಯನಾದ
ಭಕ್ತಿಗೆ ಕುಂದಿಲ್ಲ

ಕನಕ ಭಕ್ತಿಯಿಂದ ಹಾಡಿದ
ಕೃಷ್ಣ ಪಶ್ಚಿಮದಿ ತಿರುಗಿ
ಅವಗೆ ದಶ೯ನ ಕೊಟ್ಟ
ಭಕ್ತಿಗೆ ಕುಂದಿಲ್ಲ
ಕನಕ ರಾಯರಿಗೆ ಸಾಸಿವೆ ಕೊಟ್ಟ
ಕೃಷ್ಣನ ನೈವೇದ್ಯಕೆ ಗಂಜಿ ಕೊಟ್ಟ
ಕೃಷ್ಣ ಪ್ರೀತನಾದ
ಭಕ್ತಿಗೆ ಕುಂದಿಲ್ಲ

ಕುಲ ಕುಲ ಕುಲವೆಂದು
ದೂರದಿರೋಣ
ಕನಕನಂತೆ ಭಕ್ತಿಗೈದು
ಭಗವಂತನ ಒಲಿಸೋಣ.

ರಾಧಾ ಶಾಮರಾವ

Latest News

ಸರಕಾರಿ ಶಾಲೆಗೆ ೫೧ ಸಾವಿರ ಮೌಲ್ಯದ ಸೌಂಡ ಸಿಸ್ಟಮ್ ಕಾಣಿಕೆ

ಮೂಡಲಗಿ ತಾಲೂಕಿನ ಹೊನಕುಪ್ಪಿ ಗ್ರಾಮದ ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಗೆ ರೂ.೫೧,೦೦೦/ ಬೆಲೆಯ ಸೌಂಡ್ ಸಿಸ್ಟಮ್, ಮೈಕ್, ಸೌಂಡ ಬಾಕ್ಸನ್ನು ಗ್ರಾಮದ ಗುತ್ತಿಗೆದಾರ ಮಂಜುನಾಥ...

More Articles Like This

error: Content is protected !!
Join WhatsApp Group