- Advertisement -
ಪ್ರತೀಕ್ಷೆಯ ಲಹರಿ….
ಮೀನಾಕ್ಷಿಯ ಮನದೊಳು
ಪ್ರತೀಕ್ಷೆಯ ನೆರಳು
ಸಾಗುತಿದೆ ಹಗಲಿರುಳು
ಸುಂದರ ಕನಸಿನೊಳು||
ಕಟ್ಟೆಯೊಡೆದ ಭಾವನೆಗೆ
ಚೆಡಪಡಿಸಿದಳು ಭಾಮೆಯು
ನೀಲಸೀರೆ ಧರಿಸಿ ತನುವಿಗೆ
ಸ್ವರ್ಣಹಾರ ಹಾಕಿ ಚೆಲುವೆಯು||
ಮನೆದೇವರಿಗೆ ದೀಪ ಹಚ್ಚಿ
ಮನದೇವರಿಗೆ ಕಾದಳು ನೆಚ್ಚಿ
ಗಿಣಿಮೂಗಿಗೆ ನತ್ತನು ಚುಚ್ಚಿ
ಜೇನಧರಗಳಿಗೆ ಕೆಂಬಣ್ಣ ಹಚ್ಚಿ||
- Advertisement -
ಪ್ರತಿನಿಮಿಷ ಮನಹರುಷ
ಹೃದಯದಲಿ ಮಹಾಪುರುಷ
ಆಶೆಕಂಗಳಲಿ ನಲ್ಲನುತ್ಸಾಹ
ನಲ್ಲೆಯಲಿಲುಲ್ಬಣಿಸಿದೆ ಮೋಹ||
ಸಂಧ್ಯಾಕಾಲದಿ ಬಾಗಿಲತೆರೆದು
ನೂಪುರಸದ್ದದು ನಲ್ಲನಿಗೆ ತಲುಪಿ
ಗೋಪುರ ಗಂಟೆಯು ಮೊಳಗಿತು
ಚೆಂದದ ಚಂದ್ರಮ ಬಂದಿಹನು ||
ನೊಂದಿಹ ಮನದಿ ಪ್ರೀತಿಚಿಲುಮೆ
ತಂದಿಹ ನಲ್ಲೆಗೆ ಸವಿ ಜೇನಿನೊಲುಮೆ
ಹೂವಲಿ ಗಂಧವು ಬೆರೆತಂತೆ
ಹಾಲಲಿ ಸಕ್ಕರೆ ಕಲೆತಂತೆ ಬೆರೆತರು
ಪ್ರೇಮಿಗಳು ಜಗವ ಮರೆತಂತೆ.||
- Advertisement -
ಶ್ರೀ ಈರಪ್ಪ ಬಿಜಲಿ
ಈ ಸಾಮಾಜಿಕ ಜಾಲತಾಣದ ಸಂಪಾದಕರಿಗೆ.ಕವನವನ್ನು ಪ್ರಕಟ ಮಾಡಿದ್ದಕ್ಕಾಗಿ ಹೃತ್ಪೂರ್ವಕವಾದ ಧನ್ಯವಾದಗಳು
ಸರ