ಕವನ: ಮಾಗಿದ ನೋವುಗಳು

Must Read

ಮಾಗಿದ ನೋವುಗಳು !

ಏನಿತು ವಿಚಿತ್ರವು ಜೀವನದ ಪಯಣ
ಸಾಗಿದೆ ತಿರುವುವಿನಲಿ ತೀರದ ಯಾಣ

ಹಗಲಿರುಳುನಂತೆ ಕತ್ತಲು ಬೆಳಕಿನಾಟ
ಬಾಲ್ಯ ಹರೆಯ ಮುಪ್ಪಿನ ಮುಸಿಕಿನಾಟ

ಬೆನ್ನ ಮೇಲೆ ತೀರದ ಕಹಿನೆನಪಿನ ಬುತ್ತಿ
ಸಾಗಿದೆ ಮಾಗಿದ ನೋವುಗಳ ಹೊತ್ತು

ಬಿತ್ತಿದ ಬೀಜ ಗಿಡಮರವಾಗಿ ವರವಾಗಿವೆ
ಹೆತ್ತ ಮಕ್ಕಳ ಆಸರೆಯಿಲ್ಲದೆ ಭಾರವಾಗಿದೆ

ಭಾವಬಸಿರು ಜೀವಹಸಿರು ಕೆಸರಂತಾಗಿದೆ
ದುಃಖಕೆ ಕಾಯ ಬಾಗಿದೆ ಆಶ್ರಯಕೆ ಕೋಲಿದೆ !!

ಬರಿಗಾಲು ಬಾಗಿದ ಬೆನ್ನು ಭಾವದಿ ನೋವು
ಸುತ್ತ ಹಸಿರು ಹೊತ್ತಿಹಿಳು ಅನಾಥನೊಗವು

ಚಿತ್ತಗುರಿಯತ್ತ ಬತ್ತದ ಛಲದ ನಡೆಗೆ ಸಾಗಿದೆ
ಯಾರ ಯಾರ ಕಮ೯ ಕೊನೆಗೆ ಹೇಗಲೇರಲಿದೆ

ಮುಪ್ಪಿನಂಚಿಗೆ ಕಾಲ ಎಲ್ಲರ ನಿಲ್ಲಿಸುವುದು
ಹೆತ್ತವರಗಿಟ್ಟ ಪಾಪದ ನೆನಪುಉಕ್ಕಿಸುವುದು ! .

ರತ್ನಾ ಎಂ ಅಂಗಡಿ
ಹುಬ್ಬಳ್ಳಿ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group