ಮುದುಡಿದ ತಾವರೆ
ಯಾರ ಆಸರೆಯು ಪಡೆಯದವಳು
ಕೋಲಿನ ಆಸರೆ ಪಡೆದು ನಡೆದಳು
ಜೀವದಾಸೆ ತೊರೆದು ಬಾಳುವವಳು
ಒಂಟಿಯಾಗಿ ರಸ್ತೆಯಲಿ ಸಾಗಿದಳು.
ಹಣ್ಣಾದ ಮುದುಕಿ ಬಾಗಿ ನಡೆದಳು
ಜೀವನದ ಕಷ್ಟಗಳು ನುಂಗಿ ಬಿಟ್ಟಳು
ಹಲವು ತಿರುವುಗಳು ಸಾಗಿ ಬಂದಳು
ನೋವಿನ ಮೊಗವು ತೋರಿಸದವಳು.
ಮುದುಡಿದ ತಾವರೆ ಮುಖದವಳು
ಬಿಳಿ ಕೂದಲು ಹರಕು ಸೀರೆಯವಳು
ಅಂಕುಡೊಂಕು ರಸ್ತೆಯಡಿ ಹೋದಳು
ಯಾರನ್ನೂ ದೂಷಿಸದ ಗುಣದವಳು.
ಜೀವನದ ಬೇಸರವ ನಡೆದು ಕಳೆವಳು
ಮುಂಜಾನೆ ಮಂಜಿನಲಿ ಸುತ್ತಾಡುವಳು
ಮೂಲೆಯಲ್ಲಿ ಕೂಡದ ಯೌವ್ವನದವಳು
ಕಾಲನ ಬರುವಿಕೆಗೆ ಕಾಯುತ್ತಿರುವವಳು.
ಮಹಾದೇವ ರಾಯಚೂರು