ಕವನ : ವಿಜಯದಶಮಿ

Must Read

ವಿಜಯದಶಮಿ

ನವರಾತ್ರಿ ಇಂದು ಸಮಾಪ್ತಿಗೊಂಡು
ಬಂದಿತು ವಿಜಯದಶಮಿ
ನವಶಕ್ತಿ ರೂಪಿಣಿ ನವದುರ್ಗೆಯರ
ನಮಿಸುವ ಎಲ್ಲರು ಬನ್ನಿ

ಬನ್ನಿ ಮಹಾಕಾಳಿಯ ಭಕ್ತಿಯಿಂದಲಿ
ಪೂಜಿಸಿ ಬನ್ನಿಯ ಮುಡಿವ
ಹೊನ್ನ ಸಮಾನವು ಈ ದಿನ ಬನ್ನಿಯು
ಹಂಚುತ ಹರುಷವ ಪಡೆವ

ದುಷ್ಟರ ಶಿಕ್ಷಣ ಶಿಷ್ಟರ ರಕ್ಷಣ
ಎನ್ನುವ ಮಾತು ಸತ್ಯ
ಮಿತ್ಯದ ಮೇಲೆ ಸತ್ಯದ ಗೆಲುವಿನ
ಸಂಕೇತವೇ ಈ ಹಬ್ಬ

ನಾಡಿನ ಸಮಸ್ತ ಬಾಂಧವರಿಗೆಲ್ಲ
ವಿಜಯದಶಮಿ ಶುಭಾಶಯ
ಬೇಡುವ ಚಾಮುಂಡೇಶ್ವರಿ ತಾಯಿಗೆ
ಶಾಂತಿ ಸುಭೀಷ್ಟತೆ ಅಭಯ.

ಶ್ರೀಮತಿ ಕಮಲಾಕ್ಷಿ ಕೌಜಲಗಿ
ಬೆಂಗಳೂರು

Latest News

ಶಿರೀಷಗೆ ಗಡಿತಿಲಕ, ಶಶಿಗೆ ಜನ್ನಾ ಪ್ರಶಸ್ತಿ

ಬೆಳಗಾವಿ - ಇಲ್ಲಿಯ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರತಿವರ್ಷ ಕೊಡಮಾಡುವ ಕನ್ನಡ ಗಡಿತಿಲಕ ಪ್ರಶಸ್ತಿಗೆ ಶಿರೀಷ ಅವರು ಆಯ್ಕೆಯಾಗಿದ್ದಾರೆ...

More Articles Like This

error: Content is protected !!
Join WhatsApp Group