ಕವನ: ವೃದ್ಧೆಯ ಮನಸ್ಸು

Must Read

ಒಂದು ದಿನ ಮುಂಜಾನೆ

ಹಗಲಿನಲ್ಲಿ ನನ್ನಪ್ಪನಿಗೆ
ಉಪಾಹಾರ ತೆರುತ್ತಿರುವಾಗ
ನನಗೊಬ್ಬ ವೃದ್ಧೆ ಕಾಣೆಸಿದಳು

ಎಪ್ಪಾ ಬಾರೋ ನನಪ್ಪಾ
ನನ್ನನ್ನು ಇಲ್ಲಿಂದ ಅಲ್ಲಿಗೆ
ಕರೆದೊಯ್ದು ಕೂರಿಸು
ಎಂದು ಮೇಲು ಧ್ವನಿಯಲ್ಲಿ
ಕೆಳುತ್ತಾ ಕೆಮ್ಮುತ್ತಾ ಕೊರಗುತ್ತಿದ್ದಳು

ಅದನ್ನು ನೋಡಿದ ಆ ವೃದ್ಧೆಯ
ಸೋಸೆ ನಡಿಯಪ್ಪಾ ಈ ಹಣ್ಣಾದ ಮುದುಕಿಯ ಗೋಳು
ಇಷ್ಟೇ ಎಂದು ಸನ್ನೆ ಮಾಡಿ ಹೇಳಿದಳು

ಮನೆಯೊರಗಿನ ಕಟ್ಟೆಯ ಮೇಲೆ
ಕುಳಿತಿರುವ ವೃದ್ಧೆಯ ಜೀವ
ಅಳುಮುಖದಿ
ಕರೆದು ಕರೆದು ಕೆಳುತ್ತಿರುವುದು
ನನಗಾದ ನೋವು ಅಗಾಧ

ನನಗಾಗ ಅನಿಸಿದ್ದು ಇಷ್ಟೇ
ಈ ಕಾಲದ ವೃದ್ಧಾಪ್ಯ ಜೀವನ
ಉಪ್ಪಿಲ್ಲದ ಊಟದಂತಾಗಿದೆ ಎಂದು
ಕಿರಿಯರ ಮನಸ್ಸಿಗೆ ಹಿರಿಯರ
ತವತ ತಲ್ಲಣಗಳು ಅರ್ಥವಾಗುವುದಿಲ್ಲ ಇಂದು

ಪೋನೆಂಬ ಆಡಂಬರದ ಹಬ್ಬದಲ್ಲಿ
ಕಿರಿಯರು ಮುಳುಗಿಹರು ಇಂದು
ಅವರಿಗೆ ಅರ್ಥವಾಗದು
ವೃದ್ದರ ಜೀವನ ಎಂದೆಂದು

ರಾಹುಲ್ ಸರೋದೆ
ಗಂಗಾವತಿ

1 COMMENT

  1. ಕವಿತೆಯನ್ನು ಹಾಕಿದ ಸಂಪಾದಕರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು

Comments are closed.

Latest News

ಮಹಿಳೆಯರ ಅಬಲೆಯರ ಅನಾಥರ ಆಶಾಕಿರಣ ಎಸ್. ಜಿ. ಸುಶೀಲಮ್ಮ

ವರ್ಗ ವರ್ಣ ಲಿಂಗ ಭೇದ ಆಶ್ರಮ ರಹಿತ ಸಾಂಸ್ಥಿಕರಣವಲ್ಲದ ಸಮಸಮಾಜವನ್ನು ಕಟ್ಟ ಬಯಸಿದ ಅಣ್ಣ ಬಸವಣ್ಣನವರ ಆದರ್ಶ ವ್ಯಕ್ತಿತ್ವಗಳಿಗೆ ಮಾರು ಹೋಗಿ ತಮ್ಮ ಬದುಕಿನ ಆರು...

More Articles Like This

error: Content is protected !!
Join WhatsApp Group