Homeಕವನಕವನ

ಕವನ

ಉಳಿದು ಬಿಟ್ಟವು
——————————-
ಗೆಳತಿ
ಉಳಿದು ಬಿಟ್ಟವು
ನನ್ನ ಮಾತುಗಳು
ನಿನ್ನ ಮೌನದ
ತಿಜೋರಿಯಲ್ಲಿ .

ಹಾಗೆ ಉಳಿದು ಬಿಟ್ಟವು
ಊರ ಹೊರಗಿನ
ಬಂಡೆಗಳ ಮೇಲಿನ
ನಮ್ಮ ಹೆಸರುಗಳು.

ಅನಾಥವಾದವು
ಮರದ ಕೆತ್ತನೆ
ಮೂಕವಾಯಿತು
ಕಟ್ಟಿದ ಗುಬ್ಬಿ ಗೂಡು.

ಕೊಚ್ಚಿ ಹೋಯಿತು
ಮರುಳ ಮೇಲಿನ ಕಾವ್ಯ
ಕಗ್ಗತ್ತಲಿನಲಿ
ಕನಲಿದವು ಭಾವಗಳು.

ಬಾಡಿದವು ಭರವಸೆಗಳು
ಕಮರಿದವು ಕನಸುಗಳು
ಸೋತ ಆಶಯಗಳು
ಉಳಿದವು ಭಾವ ಕವನಗಳಲ್ಲಿ
————————————–
ಡಾ ಶಶಿಕಾಂತ ಪಟ್ಟಣ ಪುಣೆ

RELATED ARTICLES

Most Popular

error: Content is protected !!
Join WhatsApp Group