ಕವನ

Must Read

ಶೃಂಗೇರಿ ಶಾರದೆ

ಶೃಂಗೇರಿ ಶಾರದೆ
ನಾ ಕೈ ಮುಗಿದೆ
ವಿದ್ಯೆ ವಿಶಾರದೆ
ಸಂಗೀತ ನಿನ್ನದೆ

ಬಯಕೆ ಒಂದೇ
ನೀ ಹರಸಂದೆ
ನಿನ್ನ ಕೃಪೆ ಇರದೆ
ವಿದ್ಯೆ ಒಲಿಯುವದೆ

ಸಾಹಿತ್ಯ ಸುಧೆ
ಸಂಗೀತ ಸುರಸುಧೆ
ವಿಜ್ಞಾನ ಜ್ಞಾನಸುಧೆ
ಗಣಿತ ಗುಣಾತೀತ ಸುಧೆ

ನಿನ್ನ ಬಣ್ಣಿಸಲು
ಗುಣ ಗುಣಿಸಲು
ಧನಾತ್ಮಕ ಗುಣವಿರಲು
ಶೂನ್ಯವೆ ಇಲ್ಲ ನಿನ್ನೊಳು

ಬ್ರಹ್ಮಾಂಡ ವಿದ್ಯೆ
ನಿನ್ನೊಳು
ನಾವೆಲ್ಲ ವಿದ್ಯೆ
ಕಲಿಯಲು

ಕೋಟಿ ಕೋಟಿ
ಜನ್ಮಜನ್ಮಾಂತರಕ್ಕೂ
ಕಲಿಯಲು ಆಗ್ಬೇಕು
ಉತ್ಸುಕ ವಿದ್ಯೆ ಕಲಿಯಲು

ಅಗೋಚರ ನಿಗೂಢ
ವಿದ್ಯೆ ಬುದ್ಧಿ ಅವಘಢ
ಮಾಡದು ವಿದ್ವತ್ತು
ವಿದ್ವಾಂಸರ ಸಂಪತ್ತು

ದಡ್ಡ ನಿಗೆ ಸಣ್ಣ ವಿದ್ಯೆ
ಜಾಣನಿಗೆ ದೊಡ್ಡ ವಿದ್ಯೆ
ಕೋಟಿ ವಿದ್ಯೆಯಲ್ಲಿ
ಮೇಲು ಮೇಟಿ ವಿದ್ಯೆ
ಅನ್ನ ನಿನ್ನಿಂದ ಶಾರದೆ

ಕದಿಯದ ಸಂಪತ್ತು
ಬಾರದು ವಿಪತ್ತು
ಗೌರವ ಉತ್ತುಂಗ ಶಿಖರ
ನೀನಿದ್ದರೆ ಮನುಜ ಅಮರ

ಶ್ರೀಮತಿ ಪಾರ್ವತಿ ದೇವಿ. ಎಂ ತುಪ್ಪದ, ಬೆಳಗಾವಿ

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group