ಎಲ್ಲರಿಗೂ ನಮಸ್ಕಾರ,
ಕೊರೋನಾ ಸೋಂಕಿತನಾಗಿ ಮೂರನೇ ದಿವಸದ ಚಿಕಿತ್ಸೆ ಪಡೀತಾ ಇರೋ ನಾನು ಇಲ್ಲಿ ನನಗನಿಸಿದ ಕೆಲ ಅನಿಸಿಕೆಗಳನ್ನು ಹಂಚಿಕೊಳ್ತಾ ಇದ್ದೀನಿ.
1) ಕೊರೊನಾ ಇದು ಒಬ್ಬ ಸಾಮಾನ್ಯ ಆರೋಗ್ಯವಂತನ ಒಂದು ಸಣ್ಣ ರೋಮವನ್ನೂ ಅಲುಗಾಡಿಸಲು ಆಗದ ನಿಷ್ಕೃಷ್ಠ , ದುರ್ಬಲ ವೈರಾಣು.
2) ಈಗಾಗಲೇ ಎಷ್ಟೋ ಜನರ ದೇಹವನ್ನು ಹೊಕ್ಕು ಅವರ ಅರಿವಿಗೆ ಬಾರದೆ ಹೊರಟು ಹೋಗಿರಬಹುದಾದ ಸಾಧ್ಯತೆ ಇದೆ.
3) ಕೊರೋನಾ ವಿಷಯವಾಗಿ ಹೊರಗಡೆ ಜಗತ್ತಿನಲ್ಲಿ ಹರಿದಾಡುತ್ತಾ ಇರೋ ಗಂಭೀರತೆಗೂ ಹಾಗೂ ಸರಕಾರಿ ಆಸ್ಪತ್ರೆಗಳಲ್ಲಿ ನಮ್ಮನ್ನ ನೋಡಿಕೊಳ್ತಿರೋ ರೀತಿಗೂ ಅಕ್ಷರಶಃ ತದ್ವಿರುದ್ಧ ಸ್ಥಿತಿ ಇದೆ.
4) ಸಾಮಾನ್ಯ ಆರೋಗ್ಯವಂತ ವ್ಯಕ್ತಿಗೆ ಬಂದು ಹೋಗುವ ಒಂದು ಸಣ್ಣ ನೆಗಡಿ ಕೊಡೋವಷ್ಟು ಕಿಂಚಿತ್ ತೊಂದರೆಯನ್ನೂ ಸಹ ಈ ವೈರಾಣು ನಮಗೆ ಕೊಡಲ್ಲ.
5) ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಾ ಇರುವ ಸುಮಾರು 30 – 35 ಜನರಲ್ಲಿ ಒಬ್ಬರಿಗೂ ಸಹ ಈ ವೈರಾಣುವಿನ ಒಂದೇ ಒಂದು ಸಣ್ಣ ಲಕ್ಷಣಗಳು ಇಲ್ಲ. ಇದರರ್ಥ ಇಷ್ಟೇ, ನಮ್ಮಲ್ಲಿನ ರೋಗ ನಿರೋಧಕ ಶಕ್ತಿಯ ಮುಂದೆ ಇದರ ಶಕ್ತಿ ತುಂಬಾನೇ ಗೌಣ.
6) ಹಾಗಾಗಿ ಯಾರಿಗೇ ಈ ಕೊರೋನಾ ಬಂದರೂ ಯಾರೂ ಕೂಡ ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯತೆ ಇಲ್ಲ.
7) ಆಸ್ಪತ್ರೆಯಲ್ಲಿ ನಮಗೆ ಯಾವುದೇ ರೀತಿಯ ವಿಶೇಷ ಚಿಕಿತ್ಸೆಗಳೇನೂ ಇಲ್ಲ. ಕೇವಲ ಸಾಮಾನ್ಯವಾದ ಜ್ವರದಂತಹ ಖಾಯಿಲೆಗಳಿಗೆ ಕೊಡುವ ಮಾತ್ರೆಗಳನ್ನು ಎರಡು ಹೊತ್ತು ಕೊಡ್ತಿದಾರೆ ಅಷ್ಟೇ.
8) ಬಿಸಿ ನೀರು ಕುಡಿರಿ, ಅದು, ಇದು ಅಂತಾ ಬೊಬ್ಬೆ ಹೊಡ್ಕೊಳ್ತಾ ಇರೋ ಆರೋಗ್ಯ ಇಲಾಖೆ, ಚಿಕಿತ್ಸೆ ಪಡೀತಾ ಇರೋ ಸೋಂಕಿತರಿಗೆ ಕುಡಿಯಲು ಕನಿಷ್ಠ ಪಕ್ಷ ಬಿಸಿ ನೀರನ್ನೂ ಸಹ ಕೊಡ್ತಾ ಇಲ್ಲ. ಇದರ ಮೇಲೆ ಚಿಕಿತ್ಸೆಯ ಗಂಭೀರತೆ ಎಷ್ಟಿದೆ ಅಂತಾ ನೀವೇ ಅರ್ಥ ಮಾಡ್ಕೊಳಿ. ಇದೊಂದು ನಾಟಕೀಯ ಚಿಕಿತ್ಸೆ ಅಷ್ಟೆ.
9) ಇಲ್ಲಿರೋ ಬದಲು ನಾವು ಮನೇಯಲ್ಲೇ ಇದ್ದಿದ್ರೆ, ಇದಕ್ಕಿಂತ ಒಳ್ಳೆಯ ರೀತಿಯ ಊಟ ಮತ್ತು ಆರೈಕೆಗಳನ್ನು ನಾವೇ ಮಾಡಿಕೊಳ್ಳಬಹುದು.
10) ಕೇವಲ ವೈರಾಣು ಸೋಂಕು ಇತರರಿಗೆ ಹಬ್ಬಬಾರದು ಅನ್ನುವ ಕಾರಣಕ್ಕಷ್ಟೇ ನಮ್ಮನ್ನ ಆಸ್ಪತ್ರೆಯಲ್ಲಿ ಇರಿಸಿದ್ದಾರೆಯೇ ವಿನಃ, ಬೇರೆ ಏನೂ ವಿಶೇಷತೆಗಳಿಲ್ಲ.
11) ಇದರಿಂದ ನಿಜವಾದ ತೊಂದರೆ ಇರೋದು ಶ್ವಾಸಕೋಶದ ಮತ್ತು ಹೃದಯ ಸಂಬಂಧಿ ಖಾಯಿಲೆ ಇರೋರಿಗೆ ಮಾತ್ರ. ಸಾವನ್ನಪ್ಪುತ್ತಿರೋದು ಕೂಡ ಈ ವರ್ಗದ ಜನ ಮಾತ್ರ. ನಮ್ಮಂಥವರಿಗೆ ಇದರಿಂದ ಯಾವುದೇ ಸಣ್ಣ ಅಪಾಯ ಕೂಡ ಇಲ್ಲ.
12) ಈ ರೀತಿಯ ತೊಂದರೆ ಇರೋರನ್ನ ಈ ಸೋಂಕಿನ ಕೈಗೆ ಸಿಗದಂತೆ ಇಟ್ಟರೆ ಅಷ್ಟೇ ಸಾಕು. ಇದರಿಂದ ಈಗ ಇರುವ ಟೆನ್ಷನ್ ನಲ್ಲಿ 95% ಟೆನ್ಷನ್ ಕಡಿಮೆಯಾಗುತ್ತೆ.
13) ಕೆಲ ವರ್ಗದ ಜನಕ್ಕೆ ಈ ಕೊರೋನಾ ರಸದೌತಣ ನೀಡ್ತಾ ಇರೋ ದೊಡ್ಡ ಹಬ್ಬ. ಈ ಹಬ್ಬಕ್ಕೆ ಪಾಸಿಟಿವ್ ರೋಗಿಗಳೇ ಹರಕೆಯ ಕುರಿಗಳು.
14) ಈಗ ನಡೀತಾ ಇರೋ ಈ ಹಬ್ಬಕ್ಕೆ ಐಸೋಲೇಷನ್ ವಾರ್ಡಗಳು, ಪಿ.ಪಿ.ಇ. ಕಿಟ್ಗಳು, ಚಿಕಿತ್ಸಾ ಸಾಮಗ್ರಿಗಳು, ಸ್ಯಾನಿಟೈಜರಗಳು ಹಾಗೂ ಸೋಂಕಿತರುಗಳೇ ಕಚ್ಚಾ ಸಾಮಗ್ರಿಗಳು.
15) ವಾಸ್ತವ ಅಂದ್ರೆ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಾ ಇರುವ ಇಲಾಖೆಯ ಸಿಬ್ಬಂದಿಗಳಿಗೇ ಇದರ ಬಗ್ಗೆ ಸರಿಯಾದ ಜ್ನಾನ ಇದ್ದಂತಿಲ್ಲ. ಯಾಕಂದ್ರೆ ಯಾವೊಬ್ಬ ವೈದ್ಯಾಧಿಕಾರಿಯೂ ಖುದ್ದಾಗಿ ಸೋಂಕಿತರನ್ನು ಭೇಟಿ ಮಾಡಿ ನೋಡಿಕೊಳ್ತಾ ಇಲ್ಲ. ಸದ್ಯ ಕೊರೋನಾ ವಾರ್ಡಗಳು ನಡೀತಾ ಇರೋದು ಕೇವಲ ಸ್ಟಾಫ್ ನರ್ಸಗಳು ಹಾಗೂ ಕೆಳಹಂತದ ಸಿಬ್ಬಂದಿಗಳ ಉಸ್ತುವಾರಿಯಲ್ಲಿ. ಹೀಗಾಗಿ ಕೊರೋನಾ ಬಗ್ಗೆ ಇವರಲ್ಲೇ ಸಾಕಷ್ಟು ತಪ್ಪು ತಿಳುವಳಿಕೆ ಇದೆ ಅಂತ ನನಗನ್ನಿಸ್ತಾ ಇದೆ.
16) ಸದ್ಯಕ್ಕೆ ಕೊರೋನಾ ಒಂದು ಸೋಷಿಯಲ್ ವೈರಸ್ ಅಷ್ಟೇ. ಇದುವರೆಗೂ ಸೋಷಿಯಲ್ ಮೀಡಿಯಾಗಳು ಹಾಗೂ ಟಿ.ವಿ. ಮಾಧ್ಯಮಗಳು ಮಾತ್ರ ಜನರನ್ನ ಹೆದರಿಸುತ್ತಾ ಇವೆಯೇ ವಿನಃ ಕೊರೋನಾ ಮಾತ್ರ ಯಾರನ್ನೂ ಹೆದರಿಸಿಲ್ಲ. ಟಿ.ವಿ. ಮಾಧ್ಯಮಗಳು ಅನಗತ್ಯವಾಗಿ ಹಾಗೂ ಅವುಗಳ ಅನಿವಾರ್ಯತೆಗಾಗಿ ಜನರನ್ನ ಭಯಭೀತಗೊಳಿಸುತ್ತ ಇವೆ ಅಷ್ಟೇ. ಟಿ. ವಿ. ಮಾಧ್ಯಮಗಳ ಪ್ರಚಾರ ಬಂದ್ ಆದರೆ ಆ ಕ್ಷಣದಿಂದಲೇ ಕೊರೋನಾದ ಭಯಾನೂ ಕೂಡ ಬಂದ್ ಆಗುತ್ತೆ ಅನ್ನೋದ್ರಲ್ಲಿ ಯಾವುದೇ ಸಂಶಯ ಇಲ್ಲ.
17) ಆಸ್ಪತ್ರೆಯಲ್ಲಿ ಕೊಡ್ತಾ ಇರೋ ಚಿಕಿತ್ಸೆ ಮತ್ತು ಗಂಭೀರತೆ ನೋಡಿದ್ರೆ ಹೊರಗಡೆ ವಿವಿಧ ಇಲಾಖೆಗಳು ಮಾಡ್ತಾ ಇರೋ ಕಾರ್ಯ ವೈಖರಿಗಳು ಹಾಗೂ ಈ ಸೀಲ್ಡೌನಗಳು, ಲಾಕ್ಡೌನಗಳು, ಕ್ವಾರಂಟೈನ್ಗಳು ಕೇವಲ ವ್ಯರ್ಥ ಅನ್ನಿಸುತ್ತೆ.
18) ಎಲ್ಲೋ ಒಂದು ಕಡೆ ಸರಿಯಾದ ತಿಳುವಳಿಕೆಯ ಕೊರತೆ, ತಪ್ಪು ಮತ್ತು ಅಸಂಭದ್ಧ ನಿರ್ಣಯಗಳಿಂದಾಗಿ ಸಮಾಜದ ಮನಸ್ಥಿತಿ, ಉಪಸ್ಥಿತಿಗಳು ಹದಗೆಡುತ್ತಾ ಇವೆ ಅಂತ ಅನ್ನಿಸ್ತಾ ಇದೆ.
19) ಒಂದಂತೂ ಸತ್ಯ. ಜನರಲ್ಲಿ ಉಂಟಾಗಿರೋ ಈ ಅನಗತ್ಯ ಭಯಕ್ಕೆ ಟಿ.ವಿ. ಮಾಧ್ಯಮಗಳೇ ನೇರ ಕಾರಣವೇ ಹೊರತು ಬೇರೆ ಯಾರೂ ಅಲ್ಲ.
20) ಕೆಲವರು ಈ ಭಯಕ್ಕೆ ಬೇರೆ ದೇಶದ ಉದಾಹರಣೆಗಳನ್ನು ಕೊಡಬಹುದು. ಆದರೆ ಅಲ್ಲಿನ ಬೌಗೋಳಿಕ ಲಕ್ಷಣಗಳು, ಹವಾಮಾನ,ಅಲ್ಲಿನ ಜನರ ಆಹಾರ ಪದ್ದತಿ, ಜೀವನ ಶೈಲಿಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಹಾಗಾಗಿ ಕೊರೋನಾದ ಎಫೆಕ್ಟ್ ಕೂಡ ಕೆಲವೊಂದು ದೇಶದಲ್ಲಿ ಕೆಲವೊಂದು ರೀತಿ ಇದೆ.
21) ಕೆಲವೊಂದು ದೇಶದಲ್ಲಿ ಈ ಸೋಂಕಿನಿಂದ ಆಗುವ ನಿಜವಾದ ತೊಂದರೆಯನ್ನು ಕಂಡು ಹಿಡಿದು ತೊಂದರೆಗೀಡಾಗೋ ಜನರನ್ನು ಪ್ರತ್ಯೇಕಿಸಿ, ಸರಿಯಾದ ಕ್ರಮದಲ್ಲಿ ಚಿಕಿತ್ಸೆ ನೀಡಿರುವುದರಿಂದಲೇ ಅಂತಹ ದೇಶದಲ್ಲಿ ಸಾವುಗಳ ಪ್ರಮಾಣ ಕಡಿಮೆ ಆಗಿ ಲಾಕಡೌನ್ ಇಲ್ಲದೆಯೂ ಸಹ ಕೊರೋನಾದಿಂದ ಪಾರಾಗಿವೆ. ಈ ರೀತಿಯ ಕೆಲಸ ನಮ್ಮಲ್ಲಿ ಆಗದೇ ಇರೋದ್ರಿಂದಲೇ ಇಲ್ಲಿ ಗುಡ್ಡಕ್ಕೆ ಕಲ್ಲು ಹೊರುವ ಸಾಹಸ ನಡೀತಾ ಇದೆ.
ಸ್ನೇಹಿತರೆ, ಈ ಮೇಲಿನ ಅಂಶಗಳೆಲ್ಲಾ ನನ್ನ ವೈಯಕ್ತಿಕ ಆಭಿಪ್ರಾಯಗಳಷ್ಠೇ ! ಯಾರನ್ನೂ ದೂಷಿಸುವ, ಖಂಡಿಸುವ ಉದ್ದೇಶ ನನ್ನದಲ್ಲ. ಯಾಕೆಂದರೆ ನಾನೂ ಕೂಡ ಇದೇ ವ್ಯವಸ್ಥೆಯ ಒಂದು ಭಾಗ. ಈ ಮೇಲೆ ನಾನು ತಿಳಿಸಿರುವ ಅಂಶಗಳ ಮೇಲಿಂದ ಕೊನೆಯದಾಗಿ ಎಲ್ಲರಿಗೂ ನಾನು ಹೇಳೋದು ಇಷ್ಟೇ. ಯಾರೂ ಕೂಡ ಈ ಕೊರೋನಾಗೆ ಹೆದರುವುದು ಬೇಡ. ಧೈರ್ಯವಾಗಿರಿ. ಸೋಂಕು ಹೆಚ್ಚಿಗೆ ಹಬ್ಬದಂತೆ ಎಚ್ಚರಿಕೆ ವಹಿಸಿ. ನಮ್ಮ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸೋಣ.
ಇಂತಿ ನಿಮ್ಮ SSS. (ಕೊರೊನಾದಿಂದ ಗುಣಮುಖರಾದ ಪತ್ರಕರ್ತನ ಅನುಭವ)
ಸಂಗ್ರಹ : ಗುರುಮೂರ್ತಿ ಎಸ್. ಕೊಕ್ಕಡ .
9844909809