ಬೀದರ – ಮುಂಗಾರಿನ ಮೃಗಾ ಮಳೆ ಪ್ರವೇಶವಾದ ಹಿನ್ನೆಲೆಯಲ್ಲಿ ಮೃಗಶಿರಾ ನಕ್ಷತ್ರದಲ್ಲಿ ಕೆಮ್ಮಯ ದಮ್ಮಿಗಾಗಿ ಜೀವಂತ ಮೀನಿನೊಳಗೆ ಔಷಧ ಸೇರಿಸಿ ಸೇವಿಸುವ ಪದ್ಧತಿಯನ್ನು ಇಲ್ಲಿನ ಪಾರಂಪರಿಕ ವೈದ್ಯರು ಆರಂಭಿಸಿದ್ದಾರೆ.
ಬೀದರ್ ಜಿಲ್ಲೆಯ ಹುಮನಾಬಾದ್ ಪಟ್ಟಣದ ಜೇರಪೇಟ್ ಬಡಾವಣೆಯ ಪಾರಂಪರಿಕ ವೈದ್ಯ ಝರಣಪ್ಪಾ ಕಾಳಪ್ಪ ಅವರಿಂದ ನಾಟಿ ಔಷಧಿ ವಿತರಣೆ ಮಾಡುತ್ತಿರುವುದರಿಂದ ಸಾವಿರಾರು ಸಂಖ್ಯೆಯಲ್ಲಿ ಔಷಧಕ್ಕಾಗಿ ಬಂದು ಸೇರಿದ್ದು ಜೀವಂತ ಮೀನಿನ ಬಾಯಲ್ಲಿ ಔಷಧ ಹಾಕಿ ರೋಗಿಯ ಬಾಯಿಯಲ್ಲಿ ವೈದ್ಯರು ಹಾಕುತ್ತಾರೆ.
ಇದೊಂದು ವೈದ್ಯ ಲೋಕಕ್ಕೆ ಸವಾಲಾದ ಔಷಧಿ ಎಂದು ಹೇಳಬಹುದು ಅಲೋಪತಿ ಔಷಧಿ ಹಾಗೂ ಆರ್ಯುವೇದ ಔಷಧಿ ಅರ್ಥವನ್ನು ಇನ್ನೊಂದು ರೀತಿಯಲ್ಲಿ ನೀಡುತ್ತದೆ. ಅಲೋಪತಿ ಔಷಧವು ಆಧುನಿಕ ಪಾಶ್ಚಿಮಾತ್ಯ ವೈದ್ಯಕೀಯ ಎಂದು ಹೆಚ್ಚಿನ ಜನರು ಅರ್ಥಮಾಡಿಕೊಳ್ಳುವ ಸಾಮಾನ್ಯ ಪದವಾಗಿದೆ. ಅಲೋಪಥಿಕ್ ಔಷಧದ ವ್ಯಾಖ್ಯಾನವು ರೋಗದಿಂದ ಉಂಟಾಗುವ ವಿಭಿನ್ನ ಪರಿಣಾಮಗಳನ್ನು ಉಂಟುಮಾಡುವ ಪರಿಹಾರಗಳೊಂದಿಗೆ (ಶಸ್ತ್ರಚಿಕಿತ್ಸೆ ಅಥವಾ ಔಷಧಿಗಳಂತಹ) ರೋಗವನ್ನು ಚಿಕಿತ್ಸಿಸುವ ವಿಧಾನವೆಂದು ವಿವರಿಸುತ್ತದೆ.
ಆಯುರ್ವೇದ ಔಷಧವು ಭಾರತಕ್ಕೆ ಸ್ಥಳೀಯವಾಗಿರುವ ಸಾಂಪ್ರದಾಯಿಕ ಔಷಧದ ವ್ಯವಸ್ಥೆಯಾಗಿದೆ, ಇದು ಆರೋಗ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸಲು ಪಂಚಕರ್ಮ, ಯೋಗ, ಮಸಾಜ್ , ಅಕ್ಯುಪಂಕ್ಚರ್ ಮತ್ತು ಗಿಡಮೂಲಿಕೆ ಔಷಧಿ ಸೇರಿದಂತೆ ಹಲವಾರು ಚಿಕಿತ್ಸೆಗಳನ್ನು ಬಳಸುತ್ತದೆ.
ವರದಿ : ನಂದಕುಮಾರ ಕರಂಜೆ, ಬೀದರ