Homeಕವನಟಂಕಾಗಳು

ಟಂಕಾಗಳು


ಭುಗಿಲೆದ್ದಿದೆ
ಜಗವು ಭಯದಲಿ
ಮಹಾಮಾರಿಯೇ
ನೀ ತಂದ ಫಜೀತಿಗೆ
ಸಾವೂ ಹೆದರುತಿದೆ


ಒಕ್ಕಲೆದ್ದಿದೆ
ನೆಲೆಯು ಸಿಗದಲೆ
ಮಾರಿ ಕೊರೋನಾ
ಹೆಚ್ಚುವ ಭೀತಿಯಲಿ
ಹುಚ್ಚು ಹಿಡಿಯುತಿದೆ


ಭಯಗೊಂಡಿದೆ
ಜಗದ ಜನವಿಂದು
ಮಾರಿಗೌಷಧಿ
ಸಿಗದ ಕಾರಣಕೆ
ಸಾವಿಗೆ ಹೆದರಿದೆ


ದಿಕ್ಕುಗಾಣದೆ
ಜನ ಕಂಗಾಲಾಗಿದೆ
ಸಾವು ನೋವಿನ
ಲೆಕ್ಕ ಸಿಗದುದರ
ಭಯಕೆ ಬೆದರಿದೆ


ರೋಗ ಮುಕ್ತಿಗೆ
ಭವವು ಬಯಸಿದೆ
ಕೈ ಮುಗಿಯತ
ಮೊರೆಯನಿಡುತಿದೆ
ಧರೆಯ ದೇವರಲಿ.

ಡಾ.ಗಜಾನಂದ ಸೊಗಲನ್ನವರ
ಚಿಕ್ಕಬಾಗೇವಾಡಿ

RELATED ARTICLES

Most Popular

error: Content is protected !!
Join WhatsApp Group