ಮೋದಿ ಗರ್ಜನೆಗೆ ಮಣಿದು ಅಭಿನಂದನ್ ಬಿಡುಗಡೆ

Must Read

ಹೊಸದಿಲ್ಲಿ – ಮೋದಿಯವರ ದಿಟ್ಟ ಎಚ್ಚರಿಕೆಗೆ ಬೆದರಿ ಪಾಕಿಸ್ತಾನ ೨೦೧೯ ರಲ್ಲಿ ಬಾಲಾಕೋಟ್ ದಾಳಿಯಲ್ಲಿ ತನ್ನ ವಶಕ್ಕೆ ಸಿಕ್ಕಿದ್ದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆ ಮಾಡಿತು ಎಂಬ ಅಂಶ ಈಗ ಬೆಳಕಿಗೆ ಬಂದಿದೆ.

ಈ ಬಿಡುಗಡೆಗೆ ಶಾಂತಿಯ ಸಂಕೇತ ಎಂಬ ಹೆಸರನ್ನೂ ಪಾಕಿಸ್ತಾನ ಕೊಟ್ಟಿದ್ದು ನಗೆಪಾಟಲಿಗೆ ಈಡಾದಂತಾಗಿದೆ.

೨೦೧೯ ರ ಫೆ.೧೪ ರಂದು ಪಾಕ್ ಉಗ್ರರ ದಾಳಿಗೆ ಪ್ರತಿಯಾಗಿ ಭಾರತೀಯ ವಾಯುಸೇನೆ ಬಾಲಾಕೋಟ್ ನ ಉಗ್ರರ ಅಡಗುದಾಣಗಳ ಮೇಲೆ ಹಠಾತ್ ದಾಳಿ ಮಾಡಿ ನೂರಾರು ಉಗ್ರರ ಮಾರಣ ಹೋಮ ನಡೆಸಿತ್ತು. ಆ ಸಂದರ್ಭದಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ಪಾಕ್ ಸೈನಿಕರ ಕೈಗೆ ಸಿಕ್ಕಿಬಿದ್ದಿದ್ದರು. ಪಾಕ್ ಸೈನಿಕರು ಅಭಿನಂದನ್ ಅವರಿಗೆ ತೀವ್ರ ಹಿಂಸೆಯನ್ನೂ ನೀಡಿ ವಿಡಿಯೋ ಬಿಡುಗಡೆ ಮಾಡಿದ್ದರು.

ರಕ್ತ ಸಿಕ್ತ ಅಭಿನಂದನ್ ರ ವಿಡಿಯೋ ನೋಡಿದ್ದ ಪ್ರಧಾನಿ ನರೇಂದ್ರ ಮೋದಿ ಕ್ರುದ್ಧರಾಗಿ ಭಾರತೀಯ ಗುಪ್ತಚರ ಸಂಸ್ಥೆ ‘ ರಾ’ ಮುಖ್ಯಸ್ಥ ಧಸ್ಮಾನಾರನ್ನು ಸಂಪರ್ಕಿಸಿ, ಅಭಿನಂದನ್ ಗೆ ಏನಾದರೂ ಆದರೆ ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ನಾವು ದೀಪಾವಳಿ ಆಚರಣೆಗೆ ಶಸ್ತ್ರಾಸ್ತ್ರ ಇಟ್ಟುಕೊಂಡಿಲ್ಲ. ಪಾಕ್ ಗೆ ತಿಳಿಸಿ ಎಂದಿದ್ದರು.

ಮೋದಿಯವರ ಈ ಗುಡುಗಿಗೆ ಮಣಿದ ಪಾಕ್ ಅಭಿನಂದನರನ್ನು ಬಿಡುಗಡೆ ಮಾಡಿತ್ತು.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group