spot_img
spot_img

ಸಾಗರ ಖಂಡ್ರೆ ಗೆದ್ದಿದ್ದು ಕೇವಲ ಮುಸ್ಲಿಮರ ಮತಗಳಿಂದ ಅಂತೆ !

Must Read

- Advertisement -

ಬೀದರ – ಮುಸ್ಲಿಮ್ ಸಮುದಾಯದ ಮತಗಳಿಂದ ಬೀದರ ಜಿಲ್ಲಾ ಉಸ್ತುವಾರಿ ಸಚಿವರ ಪುತ್ರ ಸಾಗರ ಖಂಡ್ರೆಗೆ ಗೆಲುವಾಗಿದೆ ಎಂದು ಸಚಿವ ಜಮೀರ ಅಹ್ಮದ ಖಾನ್ ಹೇಳಿರುವ ಹೇಳಿಕೆ ವಿವಾದ ಸೃಷ್ಟಿಸಿದೆ.

ನಗರದ ವಕ್ಫ್ ಅದಾಲತ್ ವೇದಿಕೆಯಲ್ಲಿ ಮಾತನಾಡುತ್ತಿದ್ದ ಜಮೀರ್ ಖಾನ್, ಮುಸ್ಲಿಮರ ಮತಗಳಿಂದ ಸಾಗರ ಖಂಡ್ರೆಯವರಿಗೆ ಲೋಕಸಭೆಯಲ್ಲಿ ಗೆಲುವು ಸಿಕ್ಕಿದೆ ಎಂದು ಹೇಳಿದ್ದು ಹಿಂದೂ ಮತದಾರರನ್ನು ಕೆರಳಿಸಿದೆ. ನಾವೇನು ಖಂಡ್ರೆಗೆ ಮತ ಹಾಕೇ ಇಲ್ಲವೆ ಎಂದು ಹಿಂದೂ ಸಮುದಾಯ ಕೇಳುತ್ತಿದೆ.

ಜಮೀರ ಅಹ್ಮದ ಖಾನ್ ರ ಈ ಹೇಳಿಕೆ ಜಿಲ್ಲಾದ್ಯಂತ ಭಾರೀ ವಿವಾದ ಸೃಷ್ಟಿಸಿದ್ದು ಹಿಂದೂ ಮುಸ್ಲಿಮರಲ್ಲಿ ಕಂದಕವನ್ನೂ ಸೃಷ್ಟಿ ಮಾಡಿದೆಯೆನ್ನಲಾಗಿದೆ. ಹಿಂದೂ ಮತದಾರರಲ್ಲಿ ಅಸಮಾಧಾನವನ್ನೂ ಹುಟ್ಟುಹಾಕಿದೆ.

- Advertisement -

ಈ ಬಗ್ಗೆ ಜಿಲ್ಲಾದ್ಯಂತ ಚರ್ಚೆ ಶುರುವಾಗಿದ್ದು ಕಾಂಗ್ರೆಸ್ ನ ಮುಸ್ಲಿಮ್ ತುಷ್ಟೀಕರಣ ನೀತಿಯಿಂದಾಗಿ ಕಾಂಗ್ರೆಸ್ ದೇಶದಲ್ಲಿ ಹೀನಾಯವಾಗಿ ಸೋಲುತ್ತಿದೆಯೆಂಬ ಅಭಿಪ್ರಾಯ ಜನತೆಯಲ್ಲಿ ಕೇಳಿಬರುತ್ತಿದೆ.

ವರದಿ : ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಗುಜನಟ್ಟಿ ಗ್ರಾ ಪಂ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

ಮೂಡಲಗಿ - ತಾಲೂಕಿನ ಗುಜನಟ್ಟಿ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಾಮಾನ್ಯ ವರ್ಗದಿಂದ ಕಲ್ಲಪ್ಪ ನಿಂಗಪ್ಪ ಮುಕ್ಕಣ್ಣವರ, ಉಪಾಧ್ಯಕ್ಷರಾಗಿ...
- Advertisement -

More Articles Like This

- Advertisement -
close
error: Content is protected !!
Join WhatsApp Group