ಸ್ವಾತಂತ್ರ್ಯೋತ್ಸವ ಕವನ

Must Read

ಹೇಳೋಣ ನನ್ನ ಭಾರತ ಮಹಾನ್

ಕಟ್ಟೋಣ ಇಲ್ಲೇ ಕಾಡನ್ನು ಕಡಿದು
ದೊಡ್ಡ ದೊಡ್ಡ ನಿವೇಶನಗಳಲ್ಲಿ
ಶಾಪಿಂಗ್ ಮಾಲ್ ಗಳನ್ನ

ಕಿತ್ತೆಸೆಯೋಣ ಗುಡಿಸಲುಗಳನ್ನ
ಗೇಣು ಹೊಟ್ಟೆ ತುಂಬಿಸಲು ಹೆಣಗುವ ಮಾನವ ಗೂಡುಗಳನ್ನ

ನಿಮೂ೯ಲ ಮಾಡುತ್ತ ವನಸಿರಿಯನ್ನ
ನಿಮಿ೯ಸೋಣ ಜಲ್ಲಿ ಕಾಂಕ್ರೀಟ್ ಕಾಡುಗಳನ್ನ

ನೀರಿಲ್ಲವೆ ?
ಚಿಂತೆ ಇಲ್ಲ ತರಿಸೋಣ ಬಿಸಲೆರಿ
ಬಾಟಲ್ ಗಳನ್ನ ವಿದೇಶದಿಂದ !

ನಿಮಿ೯ ಸೋಣ ಒಂದು ಹೊಸ ವಿಶ್ವ ವಿಶ್ವಕಮ೯ ನಿಗೂ ಮಾಡಲಾಗದಂಥಾದ್ದು

ನೀತಿ ನೈತಿಕತೆಯನ್ನು ಗಂಟು ಕಟ್ಟಿ
ಬೀಸಾಡೋಣ ಗಾಂಧಿಯ ಪ್ರತಿಮೆ ಬುಡಕೆ

ಮತ್ತೆ ಹಾಡೋಣ ದೇಶ ಗಾನ
ಸುಜಲಾಂ ಸುಫಲಾಂ
ನನ್ನ ಭಾರತ ಮಹಾನ್
ನನ್ನ ಭಾರತ ಮಹಾನ್

ರಾಧಾ ಶಾಮರಾವ್
ಧಾರವಾಡ

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group