ಹರಿಸಿದರು ಬೇಂದ್ರೆ

Must Read

ಹರಿಸಿದರು ಬೇಂದ್ರೆ

ಹರಿಸಿದರು ಬೇಂದ್ರೆ
ಲೇಸನುಂಡು ಲೇಸುಸರಿ
ಲೇಸೇ ಮೈಯ ಪಡೆದು
ಚಿಮ್ಮಲಿ ಈ ಸುಖವೆಂದು
ಚೆನ್ನಸರಸತಿಯ
ನಿತ್ಯ ಸೇವೆ ಇರಲಿ ಒಲವಿರಲಿ
ಪ್ರಾಣಿ ಪಕ್ಷಿಗಳಲಿ
ನಮಿಸು ಗುರುಹಿರಿಯರ
ಪರಿಸರವ ಪ್ರೀತಿಸೆಂದು
ನಡೆನುಡಿಯಲ್ಲಿ ಚೆನ್ನುಡಿಯಲಿ
ಚಿಮ್ಮಿಸುತ ಮೃದುಭಾವ
ಅರಳಿಸುತೆಲ್ಲರ ಮನ
ದಿವ್ಯವಿರಲಿ ಜೀವನಾ
ಎಂದು ಹರಿಸಿದರು ಬೇಂದ್ರೆ
ವಿಶ್ವದ ಕುಲಕೋಟಿಯನು
ಹರಿಸಿದರು ಬೇಂದ್ರೆ
ವಿಶ್ವದ ಚೇತನರನು.

ರಾಧಾ ಶಾಮರಾವ
ಧಾರವಾಡ

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group