Homeಸುದ್ದಿಗಳುBidar News: ರಾತ್ರಿ ತಿರುಗುವವರಿಗೆ ಬಿತ್ತು ಲಾಠಿಯೇಟು

Bidar News: ರಾತ್ರಿ ತಿರುಗುವವರಿಗೆ ಬಿತ್ತು ಲಾಠಿಯೇಟು

ಬೀದರ – ಕೊರೋನಾ ಹಿನ್ನೆಲೆಯಲ್ಲಿ ಸರ್ಕಾರವು ಹತ್ತು ದಿನಗಳ ಕಾಲ ರಾತ್ರಿ ಕರ್ಫ್ಯೂ ವಿಧಿಸಿದ್ದರಿಂದ ನಗರದ ಅಂಗಡಿಗಳು, ಬಾರ್, ರೆಸ್ಟೋರೆಂಟ್ ಗಳು ಸಂಪೂರ್ಣ ಬಂದ್ ಆಗಿದ್ದವು.

ಮೊದಲ ದಿನದಿಂದಲೇ ಜಿಲ್ಲಾ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದು ರಾತ್ರಿ ಹತ್ತರ ನಂತರ ಓಡಾಡಿದವರಿಗೆ ಲಾಠಿ ರುಚಿ ತೋರಿಸಿದರು.

ಲೇಡಿ ಸಿಂಗಮ್ ಎಂದೇ ಕರೆಯಲ್ಪಡುವ ಮಾರ್ಕೇಟ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸಂಗೀತ ಅವರಿಂದ ಲಾಠಿ ರುಚಿ ನೋಡಿದ ಜನರು ಮನೆಯೊಳಗೆ ಹೊಕ್ಕು ಕೂತರು. ಕೆಲವರಿಗೆ ಸ್ಥಳದಲ್ಲಿಯೇ ಉಟಕ್ ಬೈಠಕ್ ಮಾಡಿಸಿದ ಪ್ರಕರಣವೂ ಜರುಗಿತು.

ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಸದ್ಯಕ್ಕೆ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದ್ದು ರಾತ್ರಿ ಹತ್ತರಿಂದ ಬೆಳಿಗ್ಗೆ ಆರರ ತನಕ ಅನಗತ್ಯವಾಗಿ ಓಡಾಡುವುದನ್ನು ನಿಷೇಧಿಸಲಾಗಿದೆ.

RELATED ARTICLES

Most Popular

error: Content is protected !!
Join WhatsApp Group