ಅಕ್ರಮ ಗುಟ್ಕಾ ದಂಧೆಯಲ್ಲಿ ರಾಜಕಾರಣಿಗಳು?

Must Read

ಬೀದರ – ಜಿಲ್ಲೆಯಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದ ಕಥೆ ಇದು. ನಿಷೇಧಿತ ಗುಟ್ಕಾ ಅಕ್ರಮ ದಂಧೆ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು ಇವರ ಹಿಂದೆ ರಾಜಕಾರಣಿಗಳಿಬ್ಬರ ಹೆಸರುಗಳು ಕೇಳಿಬಂದಿರುವುದರಿಂದ ಈ ಪ್ರಕರಣ ಎಲ್ಲಿಗೆ ತಲುಪುವುದೆಂಬ ಬಂದ ವಿವಿಧ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.

ಜೂನ್ 26 ರಂದು ಹೈದ್ರಾಬಾದ್ ನ ಜಮ್ಮೇರಾತ್ ಬಳಿ ವಿಮಲ್ ಗುಟ್ಕಾ ಹಾಗೂ ನಿಷೇಧಿತ ತಂಬಾಕು ಉತ್ಪನ್ನಗಳನ್ನು ಜಪ್ತಿ ಮಾಡಲಾಗಿತ್ತು.ಈ ಬಗ್ಗೆ ಹೈದರಾಬಾದ್ ನ ಶಾಹಿ ಇನಾಯತ್ ಗಂಜ್ ಠಾಣೆಯಲ್ಲಿ ಎಫ್ಆಯ್ಆರ್ ದಾಖಲಾಗಿದೆ.

ಮೂರು ಜನ ಆರೋಪಿಗಳನ್ನು ಹೈದ್ರಾಬಾದ್ ಪೊಲೀಸರು ಬಂಧಿಸಿದ್ದರು. ಪ್ರಕಾಶ್ ಮರಕೊಲೆ, ನಿಸಾರ್ ಬಂಧಿತ ಆರೋಪಿಗಳು. ಒಬ್ಬನ ಹೆಸರು ತಿಳಿದುಬಂದಿಲ್ಲ.

ವಿಚಾರಣೆಯಲ್ಲಿ ಆರೋಪಿಗಳು ಜಿಲ್ಲೆಯ ಇಬ್ಬರು ರಾಜಕೀಯ ವ್ಯಕ್ತಿಗಳ ಹೆಸರು ಬಹಿರಂಗಪಡಿಸಿದ್ದಾರೆನ್ನಲಾಗಿದ್ದು ಡಾ.ಶೈಲೆಂದ್ರ ಬೇಲ್ದಾಳೆ ಸೇರಿ ಇನ್ನೊಬ್ಬ ರಾಜಕಾರಣಿ ಹೆಸರು ಹೇಳಿದ್ದಾರೆಂಬುದು ಕುತೂಹಲಕಾರಿಯಾಗಿದೆ. ಶೈಲೇಂದ್ರ ಬೆಲ್ದಾಳೆ ಕರ್ನಾಟಕ ಸರ್ಕಾರದ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ದಿ ನಿಗಮ ನಿಯಮಿತ ಅಧ್ಯಕ್ಷ.

ತೆಲಂಗಾಣ ಹಾಗೂ ಮಹಾರಾಷ್ಟ್ರಗಳಲ್ಲಿ ಅಕ್ರಮ ಗುಟ್ಕಾ ದಂಧೆ ನಡೆಸುತ್ತಿದ್ದ ಬಗ್ಗೆ ಮಾಹಿತಿ ಬಹಿರಂಗವಾಗಿದ್ದು ತೆಲಂಗಾಣ ಹಾಗೂ ಮಹಾರಾಷ್ಟ್ರ ದಲ್ಲಿ ದಾಳಿ ನಡೆಸಿದಾಗ ಮಾಹಿತಿ ತಿಳಿದುಬಂದಿದೆ.

ವರದಿ: ನಂದಕುಮಾರ ಕರಂಜೆ,
ಟೈಮ್ಸ್ ಆಫ್ ಕರ್ನಾಟಕ, ಬೀದರ

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group