ಕವನ: ಜನುಮ ದಿನ

Must Read

ಜನುಮ ದಿನ

ತಾಯ ಒಡಲಿಂದ ಮಡಿಲಪ್ಪುಗೆ ಸೇರಿದ ದಿನ
ಪ್ರಥಮ ಅಪ್ಪುಗೆ,ಚುಂಬನ ಪಡೆದ ದಿನ
ಮುದ್ದು ಕಂದನ ಕಂಬನಿ ಸುರಿದ ಮೊದಲ ದಿನ
ನವ ಮಾಸದ ನಿದ್ರೆಗೆ ಕೊನೆ ಹಾಡಿದ ದಿನ//

ಜನ್ಮ ನೀಡಿದ ಅಮ್ಮ ಮರು ಜನ್ಮ ಪಡೆದ ದಿನ
ಕಂದ ಕೈ ಸೇರಿದಾಗ ಸ್ವರ್ಗದಾನಂದ ಸಿಕ್ಕ ದಿನ
ಕೋಮಲ ವದನ ಕಂಡಾಗ ಸಂಕಷ್ಟ ಮರೆತ ದಿನ
ಸರಿಸಾಟಿಗೆ ಸಿಗದ ಸುಂದರ ಕ್ಷಣಗಳ ದಿನ//

ಮನೆಯ ತುಂಬಾ ಕಂದನದೆ ಕಾರುಬಾರು
ತಾಯಿ ಮಗುವಿನ ಜೋಪನ ಬಲು ಜೋರು
ಮನೆಮಂದಿಯ ಸಡಗರ ತಡಿವರ್ಯಾರು
ಬೀದಿ ತುಂಬೆಲ್ಲ ಸಿಹಿ ಹಂಚಿಕೆ ಜೋರು//

ಕಂದನ ಗುರುತಿಗೆ ಕರೆದದ್ದೆ ಹೆಸರು
ಮಮತೆಯಲಿ ಕರೆವರು ನೂರೆಂಟು ಹೆಸರು
ಹೆಸರಿಡುವ ಸಡಗರದಿ ಮನೆ ತುಂಬ ಜನರು
ಶಾಸ್ತ್ರ ಪುರೋಹಿತರನೊಮ್ಮೆ ಕೇಳಿಯೇ ಬಿಡುವರು//

ಬರಿಗೈಲಿ ಕಂದನ ಎಂದೂ ನೋಡರು
ಇದ್ದಷ್ಟೇ ಕಾಣಿಕೆ ಕೊಟ್ಟೇ ಬಿಡುವರು
ಆಚಾರ ವಿಚಾರಗಳನ್ನು ಎಂದೂ ಮರೆಯರು
ಸಂಸ್ಕಾರದ ಸಂಕೇತ ನಮ್ಮ ಹಿರಿಯರು//

ತಾಯ ಋಣ ತೀರಿಸಲು ಸಾಧ್ಯವೇ?
ತಾಯ ಪ್ರೇಮಕ್ಕೆ ಅಳತೆಗೋಲುಂಟೆ?
ತಾಯಿಗಾಗಿ ಮಿಡಿ ಮನವೇ,
ತಾಯ್ನಾಡಿಗಾಗಿ ಮಡಿ ಮನವೇ.//


ಶ್ರೀಮತಿ. ಜ್ಯೋತಿ.ಸಿ.ಕೋಟಗಿ.ಸ.ಶಿ
ಸ.ಮಾ ಪ್ರಾ. ಶಾಲೆ.ತಲ್ಲೂರ

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group